ತಿಥಿ ಬಳಿಕ ಹೊಸ ಚಿತ್ರದಲ್ಲಿ ‘ಬ್ಯುಸಿ’ಯಾಗಿದ್ದಾರೆ ಪೂಜಾ

ಬುಧವಾರ, 30 ಆಗಸ್ಟ್ 2017 (16:24 IST)
ಬೆಂಗಳೂರು: ತಿಥಿ ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಹಳ್ಳಿ ಹುಡುಗಿ ಕಾವೇರಿ ಪಾತ್ರ ಚಿರಪರಿಚಿತ. ತಿಥಿ ಚಿತ್ರದ ಬಳಿಕ ಮತ್ತೆ ಪೂಜಾ ಯಾವ ಚಿತ್ರದಲ್ಲಿಯೂ ನಟಿಸಿರಲಿಲ್ಲ. ಈಗ `ನೀವು ಕರೆ ಮಾಡಿದ ಚಂದಾದಾರರು ಬ್ಯುಸಿಯಾಗಿದ್ದಾರೆ’ ಚಿತ್ರದ ಮೂಲಕ ಮತ್ತೆ ಸಿಲ್ವರ್ ಸ್ಕ್ರೀನ್ ಗೆ ಎಂಟ್ರಿ ಕೊಡ್ತಿದ್ದಾರೆ.

ತಿಥಿ ಚಿತ್ರದ ಅದ್ಭುತ ನಟನೆಗೆ ಪೂಜಾಗೆ ಅತ್ಯುತ್ತಮ ಪೋಷಕ ನಟಿ ರಾಜ್ಯ ಚಲನಚಿತ್ರ ಪ್ರಶಸ್ತಿ ಕೂಡ ಲಭಿಸಿತ್ತು. ಇದಾದ ಬಳಿಕ ಪೂಜಾ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ. ಈ ಚಿತ್ರದ ಕಥೆ ತುಂಬಾ ಇಷ್ಟವಾದ ಬಳಿಕ ಈ ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರಂತೆ.

ನಿರ್ದೇಶಕ ಸ್ಯಾಮ್ಯುವೆಲ್ ಟೋನಿ ಈ ಚಿತ್ರದ ನಿರ್ದೇಶನ ಮಾಡ್ತಿದ್ದಾರೆ. ಜೀವನದಲ್ಲಿ ಬೇರೆ ಬೇರೆ ಕಾರಣಕ್ಕೆ ಬ್ಯುಸಿಯಾಗಿರುತ್ತಾರೆ. ಕೆಲವರು ಖಾಲಿಯಿದ್ದರೂ ಬ್ಯುಸಿಯಾಗಿರುತ್ತಾರೆ. ಟ್ರೆಂಡ್ ಗೆ ತಕ್ಕಹಾಗೆ ಹೊಸ ವಿಷಯ ಆಯ್ಕೆ ಮಾಡಿಕೊಂಡಿದ್ದು, ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ. ಈ ಚಿತ್ರದಲ್ಲಿ ವಿಶೇಷ ಪಾತ್ರಕ್ಕಾಗಿ ನಾನಾ ಪಾಟೇಕರ್ ರನ್ನು ಕರೆ ತರುವ ಪ್ರಯತ್ನದಲ್ಲಿದೆ ಚಿತ್ರತಂಡ.

ವೆಬ್ದುನಿಯಾವನ್ನು ಓದಿ