ಚೇತನ್ ಹೇಳಿಕೆಗೆಲ್ಲಾ ಮಹತ್ವ ಕೊಡಬಾರದು, ದೈವಾರಾಧನೆ ನಮ್ಮ ಸಂಪ್ರದಾಯ ಎಂದ ಉಪೇಂದ್ರ

ಗುರುವಾರ, 20 ಅಕ್ಟೋಬರ್ 2022 (16:03 IST)
WD
ಬೆಂಗಳೂರು: ದೈವಾರಾಧನೆ ಮೂಲ ಹಿಂದೂ ಧರ್ಮವಲ್ಲ ಎಂಬ ನಟ ಚೇತನ್ ಹೇಳಿಕೆ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ.

ಚೇತನ್ ನಂತಹವರ ಹೇಳಿಕೆಗೆಲ್ಲಾ ಮಹತ್ವ ಕೊಡಬಾರದು. ದೈವಾರಾಧನೆ ಎಂಬುದೆಲ್ಲಾ ನಮ್ಮ ಸಂಪ್ರದಾಯ.  ಸುಮ್ನೇ ಅದರ ಮೂಲ ಅದು, ಇದು ಅಂತೆಲ್ಲಾ ವಿವಾದ ಸೃಷ್ಟಿಸಲು ಹೋಗಬಾರದು. ರಿಷಬ್ ಸಾಕಷ್ಟು ರಿಸರ್ಚ್ ಮಾಡಿ ಒಳ್ಳೆಯ ಸಿನಿಮಾ ಮಾಡಿದ್ದಾರೆ. ಎಂಜಾಯ್ ಮಾಡೋಣ ಎಂದಿದ್ದಾರೆ.

ಅಷ್ಟೇ ಅಲ್ಲ ದೈವಾರಾಧನೆ, ನಾಗಾರಾಧನೆ ಎಲ್ಲಾ ನಮ್ಮ ಸಂಪ್ರದಾಯ. ನಮ್ಮ ತಂದೆ ಈಗಲೂ ವರ್ಷಕ್ಕೊಮ್ಮೆ ನಾಗನಿಗೆ ಪೂಜೆ ಮಾಡ್ತಾರೆ. ನಂಬಿಕೆಗಳ ಬಗ್ಗೆ ಎಲ್ಲಾ ಮಾತನಾಡಲು ಹೋಗಬಾರದು ಎಂದಿದ್ದಾರೆ.


-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ