ರೈತರಿಗೆ ನೆರವಾಗಲು ಉಪಾಯ ಮಾಡಿದ ರಿಯಲ್ ಸ್ಟಾರ್ ಉಪೇಂದ್ರ

ಗುರುವಾರ, 13 ಮೇ 2021 (10:06 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಕೊರೋನಾದಿಂದ ಸಂಕಷ್ಟಕ್ಕೀಡಾದವರಿಗೆ ದಿನಸಿ ಕಿಟ್ ವಿತರಿಸಲು ಮುಂದಾಗಿರುವುದು ಎಲ್ಲರಿಗೂ ಗೊತ್ತೇ ಇದೆ.


ಈ ಸಂಬಂಧ ಅನೇಕ ದಾನಿಗಳು ಉಪೇಂದ್ರರಿಗೆ ಧನಸಹಾಯ ಮಾಡಿದ್ದಾರೆ. ಇದರಲ್ಲಿ ಚಿತ್ರರಂಗದ ಗಣ್ಯರೂ ಸೇರಿದ್ದಾರೆ. ಈ ಹಣದಿಂದ ದಿನಸಿ ಕಿಟ್ ಖರೀದಿಸಿ ಉಪೇಂದ್ರ ಸಂಕಷ್ಟದಲ್ಲಿರುವವರಿಗೆ ನೀಡಲಿದ್ದಾರೆ.

ದಿನಸಿ ಕಿಟ್ ನೀಡುವಾಗ ತರಕಾರಿಯನ್ನೂ ನೀಡಲಿದ್ದಾರೆ. ಈ ತರಕಾರಿಯನ್ನು ಅವರು ಕೊರೋನಾದಿಂದ ಸಂಕಷ್ಟಕ್ಕೀಡಾಗಿರುವ ರೈತರಿಂದ ನೇರವಾಗಿ ಖರೀದಿಸಲಿದ್ದಾರಂತೆ. ಈ ಮೂಲಕ ರೈತರಿಗೂ ನೆರವಾದಂತಾಗುತ್ತದೆ ಎನ್ನುವುದು ಅವರ ಲೆಕ್ಕಾಚಾರ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ