ಈಲಂ ತಮಿಳರ ಜೀವನದ ಕುರಿತಾದ ವೆಬ್ ಸರಣಿಯಲ್ಲಿ ನಟಿಸಲು ವಿಜಯ್ ಸೇತುಪತಿಗೆ ಆಹ್ವಾನ

ಭಾನುವಾರ, 25 ಅಕ್ಟೋಬರ್ 2020 (10:17 IST)
ಚೆನ್ನೈ : ನಟ ವಿಜಯ್ ಸೇತುಪತಿ ಅವರು ಶ್ರೀಲಂಕಾದ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರ ಜೀವನಕಥೆಯಾಧಾರಿತ ಸಿನಿಮಾದಲ್ಲಿ ನಟಿಸಬಾರದೆಂದು ಇತ್ತೀಚೆಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಅವರು ಈ ಸಿನಿಮಾವನ್ನು ಕೈಬಿಟ್ಟಿದ್ದಾರೆ.

ಆದರೆ ಇದೀಗ ಶ್ರೀಲಂಕಾದಲ್ಲಿ ತಮಿಳರ ಪರವಾಗಿ ಹೋರಾಡಿದ ಈಲಂ ತಮಿಳರ ಜೀವನದ ಕುರಿತಾದ ವೆಬ್ ಸರಣಿಗಳು ಸಿದ್ಧವಾಗಿದೆಯಂತೆ. ಎಂ.ಆರ್.ರಮೇಶ್ ನಿರ್ದೇಶನದಈ ಸರಣಿಯಲ್ಲಿ ನಟಿಸಲು ವಿಜಯ್ ಸೇತುಪತಿಗೆ ಆಹ್ವಾನ ಬಂದಿದೆಯಂತೆ. ಇದಕ್ಕೆ ನಟ ಒಪ್ಪಿದರೆ ಜನವರಿಯಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ