ಪತ್ನಿಗೆ ವಿದಾಯ ಹೇಳಿ ಹೊರಟ ವಿಜಯ್ ರಾಘವೇಂದ್ರ

ಬುಧವಾರ, 9 ಆಗಸ್ಟ್ 2023 (17:07 IST)
ಬೆಂಗಳೂರು: ಪ್ರೀತಿಯ ಪತ್ನಿಯ ಅಂತ್ಯಕ್ರಿಯೆ ನೆರವೇರಿದ ಬಳಿಕ ನಟ ವಿಜಯ್ ರಾಘವೇಂದ್ರ ಮತ್ತು ಕುಟುಂಬಸ್ಥರು ವಾಪಸ್ ಆಗಿದ್ದಾರೆ.

ಶ್ರೀರಾಂಪುರದ ಹರಿಶ್ಚಂದ್ರಘಾಟ್ ನ ವಿದ್ಯುತ್ ಚಿತಾಗಾರದಲ್ಲಿ ಅಂತಿಮ ಕ್ರಿಯೆಗಳು ನೆರವೇರಿವೆ. ಸ್ಪಂದನಾ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಅಂತಿಮವಾಗಿ ಸ್ಪಂದನಾರನ್ನು ಚಿತೆಗೇರಿಸಿದಾಗ ವಿಜಯ್ ರಾಘವೇಂದ್ರ, ಪುತ್ರ ಶೌರ್ಯ, ಶ್ರೀಮುರಳಿ, ಸ್ಪಂದನ ತಂದೆ, ಸಹೋದರರು ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ಮನಕಲಕುವಂತಿತ್ತು.

ಪತ್ನಿಯ ಅಂತ್ಯಕ್ರಿಯೆ ಮುಗಿಯುತ್ತಿದ್ದಂತೇ ಭಾರವಾದ ಹೃದಯದೊಂದಿಗೆ ಪುತ್ರ ಶೌರ್ಯನ ಕೈ ಹಿಡಿದು ವಿಜಯ್ ರಾಘವೇಂದ್ರ ಮನೆಯತ್ತ ಹೆಜ್ಜೆ ಹಾಕಿದ್ದಾರೆ. ಈಡಿಗ ಬಿಲ್ಲವ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ