ಅಗ್ನಿಸಾಕ್ಷಿ ಸಿದ್ಧಾರ್ಥ್ ನ ಹೊಸ ಪ್ರೇಮಲೋಕ ಅನಾವರಣ!

ಶನಿವಾರ, 22 ಜೂನ್ 2019 (09:35 IST)
ಬೆಂಗಳೂರು: ಅಗ್ನಿಸಾಕ್ಷಿಯಿಂದ ಹೊರಬಂದ ಸಿದ್ಧಾರ್ಥ್ ಅಲಿಯಾಸ್ ವಿಜಯ್ ಸೂರ್ಯ ಸ್ಟಾರ್ ಸುವರ್ಣ ವಾಹಿನಿಯ ಹೊಸ ಧಾರವಾಹಿಯಲ್ಲಿ ನಟಿಸಲಿರುವ ಸುದ್ದಿ ಓದಿರುತ್ತೀರಿ.


ಅಗ್ನಿಸಾಕ್ಷಿಯನ್ನು ಮೊದಲು ನಿರ್ದೇಶಿಸುತ್ತಿದ್ದ ಮೈಸೂರು ಮಂಜು ಈಗ ಸುವರ್ಣ ವಾಹಿನಿಗಾಗಿ ‘ಪ್ರೇಮಲೋಕ’ ಎನ್ನುವ ಧಾರವಾಹಿ ನಿರ್ದೇಶಿಸಲಿದ್ದು, ಅದಕ್ಕೆ ವಿಜಯ್ ಸೂರ್ಯ ನಾಯಕರಾಗಿದ್ದಾರೆ.

ಈಗ ಆ ಧಾರವಾಹಿಯ ಪ್ರೋಮೋಗಳು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಗೆ ಕುತೂಹಲ ಮೂಡಿಸಲಾಗಿದೆ. ವಿಜಯ್ ಸೂರ್ಯರ ಎರಡನೇ ಇನಿಂಗ್ಸ್ ಇದು ಎಂದೇ ಇದನ್ನು ಬಣ್ಣಿಸಲಾಗುತ್ತಿದೆ. ಈಗಾಗಲೇ ಅಗ್ನಿಸಾಕ್ಷಿ ಮೂಲಕ ಗುಳಿಕೆನ್ನೆಲಯ ಹೀರೋ ವಿಜಯ್ ಸೂರ್ಯ ಅದೆಷ್ಟೋ ಹೆಂಗಳೆಯರ ಫೇವರಿಟ್ ಆಗಿದ್ದರು. ಇದೀಗ ಮತ್ತೊಂದು ಪ್ರೇಮ ಕತೆ ಮೂಲಕವೇ ತೆರೆಗೆ ಬರುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ