ಪುನೀತ್ ರಾಜ್ ಕುಮಾರ್ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನಿರೂಪಣೆ ಮಾಡಲು ಇವರೇ ಕಾರಣ!

ಬುಧವಾರ, 19 ಜೂನ್ 2019 (10:18 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೇ ಶನಿವಾರದಿಂದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಆರಂಭವಾಗಲಿದ್ದು, ಈ ಕಾರ್ಯಕ್ರಮಕ್ಕೂ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಪುನೀತ್ ರಾಜ್ ಕುಮಾರ್ ತಾವು ಶೋ ನಡೆಸಿಕೊಡಲು ಕಾರಣ ಯಾರು ಎಂದು ಬಹಿರಂಗಪಡಿಸಿದ್ದಾರೆ.


ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೇ ಮೊದಲ ಬಾರಿಗೆ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಇದಕ್ಕೂ ಮೊದಲು ಸುವರ್ಣವಾಹಿನಿಯಲ್ಲಿ ಮೂರು ಸೀಸನ್ ಪ್ರಸಾರವಾಗಿತ್ತು. ಆ ಪೈಕಿ ಮೊದಲ ಎರಡು ಸೀಸನ್ ಗಳಲ್ಲಿ ಪುನೀತ್ ನಿರೂಪಕರಾಗಿದ್ದರು.

ಮೊದಲ ಬಾರಿಗೆ ಈ ಶೋ ನಡೆಸಿಕೊಡಲು ಪವರ್ ಸ್ಟಾರ್ ಬಳಿ ಕೇಳಿಕೊಂಡಾಗ ಹಿಂದಿಯ ಅಮಿತಾಭ್ ಬಚ್ಚನ್ ಕಾರ್ಯಕ್ರಮ ನೋಡಿ ಇವರಿಗೆ ಭಯವಾಗಿತ್ತಂತೆ. ತನಗೂ ಆ ಮಟ್ಟಕ್ಕೆ ಕಾರ್ಯಕ್ರಮ ನಿರೂಪಿಸಲು ಸಾಧ್ಯವೇ ಎಂದು ಹಿಂಜರಿದಿದ್ದರಂತೆ. ಆದರೆ ಅಮ್ಮ ಪಾರ್ವತಮ್ಮ ರಾಜ್ ಕುಮಾರ್, ಅಣ್ಣಂದಿರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಧೈರ್ಯ ತುಂಬಿ ಒಪ್ಪಿಸಿದರಂತೆ.

ಅಂದ ಹಾಗೆ ಈಗಲೂ ನನ್ನ ಜತೆಗೆ ರಾಘವೇಂದ್ರ ರಾಜ್ ಕುಮಾರ್ ಈ ಕಾರ್ಯಕ್ರಮ ನಡೆಸಿಕೊಡಲು ಸಹಾಯ ಮಾಡುತ್ತಾರೆ. ಈ ಜವಾಬ್ಧಾರಿಯುತ ಸೀಟ್ ನಲ್ಲಿ ಕುಳಿತು ನಾನೂ ನನ್ನ ಜ್ಞಾನ ವೃದ್ಧಿಸಿಕೊಳ್ಳುತ್ತಿದ್ದೇನೆ ಎಂದು ಪುನೀತ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ