ಗಂಡ ದರ್ಶನ್ ರಕ್ಷಣೆಗೆ ನಟ ಧನ್ವೀರ್ ಜೊತೆ ವಿಜಯಲಕ್ಷ್ಮಿ ಹೋಗಿದ್ದೆಲ್ಲಿಗೆ: ಇಲ್ಲಿದೆ ವಿಡಿಯೋ

Krishnaveni K

ಬುಧವಾರ, 9 ಅಕ್ಟೋಬರ್ 2024 (12:54 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಹಂತದಲ್ಲಿರುವಾಗ ಪತ್ನಿ ವಿಜಯಲಕ್ಷ್ಮಿ ಇಂದು ದೇವರ ಮೊರೆ ಹೋಗಿದ್ದಾರೆ. ಅವರಿಗೆ ನಟ ಧನ್ವೀರ್ ಕೂಡಾ ಸಾಥ್ ನೀಡಿದ್ದಾರೆ.

ವಿಜಯಲಕ್ಷ್ಮಿ ಪತಿಯ ಬಿಡುಗಡೆಗಾಗಿ ಹೆಣಗಾಡುತ್ತಿದ್ದರೆ ಅವರಿಗೆ ಸಾಥ್ ನೀಡುತ್ತಿರುವವರು ನಟ ಧನ್ವೀರ್ ಮತ್ತು ಬಾಮೈದ ದಿನಕರ್ ತೂಗುದೀಪ. ಇಂದೂ ಕೂಡಾ ದರ್ಶನ್ ಜಾಮೀನು ಅರ್ಜಿಯ ಪ್ರತಿವಾದ ಪ್ರಕ್ರಿಯೆ ಕೋರ್ಟ್ ನಲ್ಲಿ ನಡೆಯಲಿದೆ. ಎಸ್ ಪಿಪಿ ಪ್ರಸನ್ನಕುಮಾರ್ ಪ್ರತಿವಾದ ಮಂಡಿಸುತ್ತಿದ್ದಾರೆ.

ಇದೀಗ ಜಾಮೀನು ಅರ್ಜಿ ವಿಚಾರ ನಿರ್ಣಾಯಕ ಹಂತದಲ್ಲಿದ್ದು ವಿಜಯಲಕ್ಷ್ಮಿ ಪತಿಯ ಒಳಿತಿಗಾಗಿ ನಾಡದೇವತೆ ಚಾಮುಂಡೇಶ್ವರಿ ಮೊರೆ ಹೋಗಿದ್ದಾರೆ. ದರ್ಶನ್ ಗೆ ಬೆನ್ನು ನೋವಿನ ಸಮಸ್ಯೆಯೂ ಕಾಡುತ್ತಿದ್ದು, ಅದೇ ವಿಚಾರವನ್ನಿಟ್ಟುಕೊಂಡು ಜಾಮೀನು ಪಡೆಯಲು ದರ್ಶನ್ ಮುಂದಾಗಬಹುದು. ಒಟ್ಟಿನಲ್ಲಿ ಇದು ದರ್ಶನ್ ಗೆ ನಿರ್ಣಾಯಕ ಸಮಯ.

ಹೀಗಾಗಿಯೇ ಇಂದು ವಿಜಯಲಕ್ಷ್ಮಿ ದರ್ಶನ್ ಚಾಮುಂಡೇಶ್ವರಿ ಸನ್ನಿಧಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ. ಗಂಡನ ಬಿಡುಗಡೆಗಾಗಿ ಪ್ರಾರ್ಥನೆ ನಡೆಸಿದ್ದಾರೆ. ಈ ವೇಳೆ ಅವರಿಗೆ ಬೆಂಗಾವಲಾಗಿ ಧನ್ವೀರ್ ಕೂಡಾ ಸಾಥ್ ನೀಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ.

ಕರುನಾಡಿನ ತಾಯಿ, ಮೈಸೂರಿನ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದ ವಿಜಯಲಕ್ಷ್ಮಿ ದರ್ಶನ್! ಸದ್ಯ ಹಲವು ಸವಾಲುಗಳನ್ನು ಎದುರಿಸುತ್ತಿರುವ ಇವರು, ಒಳಿತನ್ನು ಬೇಡುತ್ತ ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಪಡೆದಿದ್ದಾರೆ. @dasadarshan#namtalkies #vijayalakshmidarshan #dboss #Darshanthoogudeepa pic.twitter.com/wwdnS3p5PC

— ನಮ್ ಟಾಕೀಸ್.ಇನ್ (@Namtalkies) October 9, 2024

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ