ಕೊನೆಗೂ ದರ್ಶನ್ ಭೇಟಿಗೆ ಬಂದ ವಿಜಯಲಕ್ಷ್ಮಿ: ಎರಡು ಬ್ಯಾಗ್ ಕೊಟ್ಟು ಎರಡು ಬ್ಯಾಗ್ ತಗೊಂಡ ದಾಸ

Krishnaveni K

ಗುರುವಾರ, 12 ಸೆಪ್ಟಂಬರ್ 2024 (12:36 IST)
ಬಳ್ಳಾರಿ: ಕೊನೆಗೂ ಬಳ್ಳಾರಿ ಜೈಲಿನಲ್ಲಿರುವ ಪತಿ ದರ್ಶನ್ ಭೇಟಿಗೆ ಇಂದು ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ತೂಗುದೀಪ ಬಂದಿದ್ದಾರೆ. ಎಂದಿನಂತೆ ಎರಡು ಬ್ಯಾಗ್ ತಂದಿದ್ದ ವಿಜಯಲಕ್ಷ್ಮಿ, ದಾಸನ ಕೈಯಿಂದ ಎರಡು ಬ್ಯಾಗ್ ಪಡೆದುಕೊಂಡಿದ್ದಾರೆ.

ಕಳೆದ ವಾರ ವಿಜಯಲಕ್ಷ್ಮಿ ಪತಿಗೆ ಡ್ರೈ ಫ್ರೂಟ್ಸ್, ಬಿಸ್ಕೆಟ್ ಕೊಟ್ಟು ಮತ್ತು ಅಗತ್ಯದ ಬಟ್ಟೆಬರೆ ಕೊಟ್ಟು ಹೋಗಿದ್ದರು. ಇಂದು ಮತ್ತೆ ಜೈಲಿಗೆ ಬಂದ ವಿಜಯಲಕ್ಷ್ಮಿ ಈವತ್ತೂ ಎರಡು ಬ್ಯಾಗ್ ಗಳಲ್ಲಿ ಬಟ್ಟೆ, ಡ್ರೈ ಫ್ರೂಟ್ಸ್ ಮತ್ತು ಬಿಸ್ಕತ್, ಹಣ್ಣುಗಳನ್ನು ಕೊಟ್ಟಿದ್ದಾರೆ.

ಕಳೆದ ಬಾರಿಯಂತೆ ಈ ಬಾರಿಯೂ ದಿನಕರ್ ಜೊತೆ ವಿಜಯಲಕ್ಷ್ಮಿ ಜೈಲಿಗೆ ಬಂದಿದ್ದಾರೆ. ದರ್ಶನ್ ತಮ್ಮ ತಾಯಿಯನ್ನು ನೋಡಲು ಆಸೆಪಟ್ಟಿದ್ದರು ಎಂಬ ಸುದ್ದಿಯಾಗಿತ್ತು. ಆದರೆ ಮೀನಾ ತೂಗುದೀಪ ಇಂದು ಜೈಲಿಗೆ ಬಂದಿಲ್ಲ. ಇಂದು ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗುತ್ತಿದ್ದು, ಪತ್ನಿ ಮತ್ತು ಸಹೋದರನ ಭೇಟಿ ದರ್ಶನ್ ಮಾನಸಿಕ ಸ್ಥೈರ್ಯ ಹೆಚ್ಚಿಸಲಿದೆ.

ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿದರ್ಶನ್ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿ 15 ದಿನಗಳೇ ಕಳೆದಿದೆ. ಇದುವರೆಗೆ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ಮೊನ್ನೆಯಷ್ಟೇ ಅವರ ವಕೀಲರ ಹೇಳಿಕೆ ಗಮನಿಸಿದರೆ ಇಂದೂ ಅವರು ಜಾಮೀನಿಗೆ ಅರ್ಜಿ ಸಲ್ಲಿಸುವುದು ಅನುಮಾನ ಎನ್ನಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ