ನಟಿ ಕವಿತಾ ರಾಧೆಶ್ಯಾಮ್ ಗೆ ಬೆದರಿಕೆ ಹಾಕಲು ಕಾರಣವೇನು?

ಭಾನುವಾರ, 22 ಏಪ್ರಿಲ್ 2018 (07:11 IST)
ಹೈದರಾಬಾದ್ : ತೆಲುಗು ನಟಿ ಶ್ರೀರೆಡ್ಡಿ ಅವರು ಕಾಸ್ಟಿಂಗ್ ಕೌಚ್ ವಿರುದ್ಧ ಧ್ವನಿ ಎತ್ತಿ ಅರೆಬೆತ್ತಲಾಗಿ ಪ್ರತಿಭಟನೆ ನಡೆಸಿರುವುದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನಟಿ ಕವಿತಾ ರಾಧೆಶ್ಯಾಮ್ ಅವರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.


ನಟಿ ಎಂದ ಮೇಲೆ ಪ್ರೈವೇಟ್ ಪಾರ್ಟ್ಸ್ ಕ್ಯಾಮೆರಾ ಎದುರು ತೋರಿಸಬೇಕು. ಶ್ರೀರೆಡ್ಡಿ ಪ್ರಚಾರಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಟೀಕಿಸಿ ಅರೆನಗ್ನ ವಿಡಿಯೋ ಪೋಸ್ಟ್ ಮಾಡಿ ಶ್ರೀರೆಡ್ಡಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ನಟಿ ಕವಿತಾ ರಾಧೆಶ್ಯಾಮ್ ಅವರಿಗೆ ಪೋಸ್ಟ್ ಮಾಡಲಾಗಿರುವ ವಿಡಿಯೋ ತೆಗೆದು ಕ್ಷಮೆ ಕೇಳುವ ವಿಡಿಯೋ ಅಪ್ ಲೋಡ್ ಮಾಡಬೇಕೆಂದು ಒತ್ತಾಯಿಸಿ ಬೆದರಿಕೆ ಹಾಕಲಾಗಿದೆ.


ಅಪರಿಚಿತರಿಂದ ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ಕವಿತಾ ರಾತ್ರಿ ಉಪ್ಪಾರ ಪೇಟೆ ಠಾಣೆಗೆ ದೂರು ನೀಡಲು ಮುಂದಾಗಿದ್ದು, ಬಳಿಕ ಪೊಲೀಸರ ಸಲಹೆಯಂತೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ