ನಟ ಚಂದನ್ ಸಿನಿಮಾ ವಿಮರ್ಶಕರ ವಿರುದ್ಧ ಮಾತನಾಡಿದ್ದು ಯಾಕೆ ಗೊತ್ತಾ?

ಬುಧವಾರ, 21 ಫೆಬ್ರವರಿ 2018 (06:28 IST)
ಬೆಂಗಳೂರು : ‘ಪ್ರೇಮ ಬರಹ’ ಚಿತ್ರದ ನಟ ಚಂದನ್ ಅವರು ಕನ್ನಡ ಸಿನಿಮಾ ವಿಮರ್ಶಕರ ವಿರುದ್ಧ ಮಾತನಾಡಿ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ.


ಅರ್ಜುನ್ ಸರ್ಜಾ ಅವರು ನಿರ್ದೇಶಿಸಿರುವ ‘ಪ್ರೇಮ ಬರಹ’ ಸಿನಿಮಾಗೆ ವಿಮರ್ಶಕರಿಂದ ಒಳ್ಳೆಯ ಅಭಿಪ್ರಾಯ ಬಂದಿರಲಿಲ್ಲ. ಪತ್ರಿಕೆಗಳು, ಆನ್ ಲೈನ್ ಮೀಡಿಯಾಗಳು ಈ ಸಿನಿಮಾಗೆ ಕಡಿಮೆ ಅಂಕ ನೀಡಿದ್ದವು. ಇದರಿಂದ ಬೇಸರಗೊಂಡ ಚಂದನ್ ಅವರು ಫೇಸ್ ಬುಕ್ ಲೈವ್ ನಲ್ಲಿ,’ ಕಾಸು ಕೊಟ್ಟು ಸಿನಿಮಾ ನೋಡೋ ಜನರ ವಿಮರ್ಶೆ ಕೇಳಿ. ಕಾಸು ಕೇಳಿ ವಿಮರ್ಶೆ ಬರೆಯುವವರ ಮಾತು ಕೇಳಬೇಡಿ. ಅವರು ನನ್ನ ಕೂದಲಿಗೆ ಸಮ’ ಎಂದು ಹೇಳಿ ಕೂದಲು ಕಿತ್ತುಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಿಂದ ಚಂದನ್ ಅವರು ವಿಮರ್ಶಕರ ಕೆಂಗಣ್ಣಿಗೆ ಗುರಿಯಾಗುವ ಅನುಮಾನ ಕೂಡಾ ಮೂಡುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ