ಟಗರು ಚಿತ್ರದ ನಟಿ ಮಾನ್ವಿತಾ ಪೊಗರು ತೋರಿಸಿದ್ದು ಯಾಕಂತೆ...?

ಭಾನುವಾರ, 7 ಜನವರಿ 2018 (06:54 IST)
ಬೆಂಗಳೂರು : ನಟಿ ಮಾನ್ವಿತಾ ಹರೀಶ್ ಅವರು ಕೆಂಡಸಂಪಿಗೆ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ನಂತರ ಅವರಿಗೆ ಸ್ಟಾರ್ ನಟರ ಜೊತೆ ನಟಿಸುವ ಅವಕಾಶ ದೊರೆಯಿತು. ಆದರೆ ಈಗ ಆಕೆಗೆ ಪೊಗರು ಜಾಸ್ತಿಯಾಗಿದೆ ಎಂಬ ಸುದ್ದಿ ಎಲ್ಲಾ ಕಡೆ ಕೇಳಿಬರುತ್ತಿದೆ.

 
ಮಾನ್ವಿತಾ ಹರೀಶ್ ಅವರು ಈಗ ಟಗರು ಚಿತ್ರದಲ್ಲಿ ಬ್ಯೂಸಿಯಾಗಿದ್ದು, ಟಗರು ಚಿತ್ರದಲ್ಲಿ ಅವಕಾಶ ಸಿಕ್ಕ ತಕ್ಷಣ ಇವರಿಗೆ ಪೊಗರು ಜಾಸ್ತಿಯಾಗಿದೆಯಂತೆ. ಏಕೆಂದರೆ ಕನಕ ಚಿತ್ರದ ಪ್ರೋಮೋ ಸಾಂಗ್ ಬಿಡುಗಡೆ ಸಮಾರಂಭದಲ್ಲಿ  ಭಾಗವಹಿಸಿದ್ದ ಈಕೆ ಕನಕ ಸಿನಿಮಾದ ಪೋಸ್ಟರ್ ಗಳಲ್ಲಿ ವಿಜಯ್ ಒಬ್ಬರೇ ರಾರಾಜಿಸುತ್ತಿರುವುದನ್ನು ಕಂಡು ಮಾನ್ವಿತಾ ಅವರು ಕೋಪಗೊಂಡು ಕಾರ್ಯಕ್ರಮದಿಂದ ಹೊರಗೆ ಬರಲು ಮುಂದಾಗಿದ್ದರಂತೆ. ನಂತರ ನಿರ್ದೇಶಕ ಆರ್.ಚಂದ್ರು ಅವರು ನಟಿಯ ಮನವೊಲಿಸಿ ಕಾರ್ಯಕ್ರಮದಲ್ಲಿ ಉಳಿದುಕೊಳ್ಳುವಂತೆ ಮಾಡಿದರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ