ಲಾಯರ್ ಮುಂದೆಯೂ ದರ್ಶನ್ ನಡೆದ ವಿಚಾರವನ್ನು ಹೇಳಿಲ್ಲ ಯಾಕೆ

sampriya

ಶನಿವಾರ, 15 ಜೂನ್ 2024 (16:41 IST)
Photo By X
ಬೆಂಗಳೂರು: ಚಿತ್ರದುರ್ಗಾದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ನಟ ದರ್ಶನ್‌  ಸೇರಿದಂತೆ 16 ಮಂದಿಯನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಈ ಪ್ರಕರಣ ಸಂಬಂಧ ದರ್ಶನ್‌ ಪರ ವಕೀಲ ಮಾತನಾಡಿ,  ಪ್ರಕರಣ ಸಂಬಂಧ ದರ್ಶನ್‌ ಅವರನ್ನು ವಶಕ್ಕೆ ಪಡೆದಾಗ ಅವರು ಶಾಕ್‌ ಆಗಿದ್ದರು. ಇನ್ನೂ ಇದುವರೆಗೂ ಪ್ರಕರಣ ಸಂಬಂಧ ದರ್ಶನ್‌ ಅವರನ್ನು ಎರಡು ಬಾರಿ ಭೇಟಿಯಾಗಿದ್ದೇನೆ. ಅವರ ಆರೋಗ್ಯದ ವಿಚಾರ ಬಿಟ್ಟರೆ ಬೇರೆನೂ  ಅವರ ಜತೆ ಮಾತನಾಡಲು ಸಾಧ್ಯವಾಗಿಲ್ಲ ಎಂದರು.

ಇನ್ನೂ ದರ್ಶನ್‌ ಅವರು ಪೊಲೀಸ್‌ ವಶದಲ್ಲಿದ್ದಾಗ ನಾನು  ಎರಡು ಬಾರಿ ಭೇಟಿಯಾಗಿದ್ದೇನೆ. ಆದರೆ ಪ್ರಕರಣ ಸಂಬಂಧ ಅವರೂ ಏನನ್ನೂ ನನ್ನ ಜತೆ ಮಾತನಾಡಿಲ್ಲ.  ಪೊಲೀಸರು ಕಾನೂನಿನ ಪ್ರಕಾರ ಅವರ ಕರ್ತವ್ಯ ಮಾಡುತ್ತಿದ್ದಾರೆ ಎಂದರು.

ಇನ್ನೂ ಈ ಘಟನೆ ಬಗ್ಗೆ ಅವರ  ಪತ್ನಿ ವಿಜಯಲಕ್ಷ್ಮೀ ಅವರೂ ಕೂಡಾ ಶಾಕಿಂಗ್‌ನಲ್ಲಿದ್ದು, ದರ್ಶನ್‌ ಅವರನ್ನು ಇದುವರೆಗೂ ಅವರ ಭೇಟಿಯಾಗಿಲ್ಲ. ಅವರಿಗೆ ಇನ್ನೆರಡು ದಿನ ಈ ಪ್ರಕರಣದಿಂದ ಹೊರಬರಲು ಸಮಯವಕಾಶ ಬೇಕಾಗಿದೆ. ಅದಲ್ಲದೆ ಖಂಡಿತ ಅವರು ಮಾಧ್ಯಮದ ಮುಂದೆ ಈ ಬಗ್ಗೆ ಪ್ರತಿಕ್ರಿಯಿಸುತ್ತಾರೆ ಎಂದರು.

ಇನ್ನೂ ದರ್ಶನ್‌ ಅವರಿಗೆ ಕಾನೂನಿನ ಪ್ರಕಾರ ವಿಜಯಲಕ್ಷ್ಮೀ ಅವರು ಒಬ್ಬರೇ ಹೆಂಡತಿ. ಪೊಲೀಸ್‌ನವರು ತಪ್ಪಾಗಿ ಹೇಳಿಕೆ ನೀಡಿದ್ದಾರೆ. ಇನ್ನೂ ಪವಿತ್ರಾ ಗೌಡ ಅವರು ದರ್ಶನ್‌ ಅವರಿಗೆ ಚಿತ್ರರಂಗದ ಸ್ನೇಹಿತೆ ಅಷ್ಟೇ. ಬೇರೆನೂ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ