ವಿಜಯಲಕ್ಷ್ಮಿ ಮಾತ್ರ ದರ್ಶನ್ ಹೆಂಡತಿ, ಪವಿತ್ರಾ ಗೌಡ ಅಲ್ಲ: ಲಾಯರ್ ಸ್ಪಷ್ಟನೆ

Krishnaveni K

ಶನಿವಾರ, 15 ಜೂನ್ 2024 (15:57 IST)
ಬೆಂಗಳೂರು: ನಟ ದರ್ಶನ್ ಹೆಂಡತಿ ವಿಜಯಲಕ್ಷ್ಮಿ ಮಾತ್ರ, ಪವಿತ್ರಾ ಗೌಡ ಕೇವಲ ಸ್ನೇಹಿತೆ ಮಾತ್ರ ಎಂದು ದರ್ಶನ್ ಪರ ಲಾಯರ್ ಸ್ಪಷ್ಟೀಕರಣ ಕೊಟ್ಟಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾದ ನಂತರ ಪವಿತ್ರಾ ಜೊತೆಗಿನ ದರ್ಶನ್ ಸಂಬಂಧ ಗಂಡ-ಹೆಂಡತಿಯದ್ದು ಎಲ್ಲಾ ಕಡೆ ಸುದ್ದಿಯಾಗಿದೆ. ಪೊಲೀಸರೂ ದರ್ಶನ್ ಹೆಂಡತಿ ಪವಿತ್ರಾಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದರು ಎಂದಿದ್ದರು. ಈ ಮೂಲಕ ಪವಿತ್ರಾ, ದರ್ಶನ್ ಹೆಂಡತಿ ಎಂದು ಎಲ್ಲಾ ಕಡೆ ಸುದ್ದಿಯಾಗಿತ್ತು.

ಆದರೆ ಇದೀಗ ದರ್ಶನ್ ಪರ ವಕೀಲರು ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. ‘ದರ್ಶನ್ ಕಾನೂನಾತ್ಮಕವಾಗಿ ಮದುವೆಯಾಗಿರುವ ಏಕೈಕ ಹೆಂಡತಿ ಎಂದರೆ ಅದು ವಿಜಯಲಕ್ಷ್ಮಿ ಮಾತ್ರ. ಮಾಧ್ಯಮಗಳಲ್ಲಿ ಎಲ್ಲಾ ಕಡೆ ಪವಿತ್ರಾ, ದರ್ಶನ್ ಪತ್ನಿ ಎಂದು ಸುದ್ದಿಯಾಗುತ್ತಿರುವುದು ವಿಜಯಲಕ್ಷ್ಮಿಗೆ ನೋವಾಗಿದೆ.

ಈ ಘಟನೆಯೇ ಅವರಿಗೆ ಒಟ್ಟಾರೆಯಾಗಿ ಶಾಕ್ ನೀಡಿದೆ. ಇದರಿಂದಾಗಿ ಅವರು ಹೊರಗೆ ಬರಲೂ ಆಗದ ಸ್ಥಿತಿಯಲ್ಲಿದ್ದಾರೆ. ಪವಿತ್ರಾ ಕೇವಲ ದರ್ಶನ್ ಗೆ ಸ್ನೇಹಿತೆ ಅಷ್ಟೇ. ಅದರ ಹೊರತು ಅವರಿಬ್ಬರ ನಡುವೆ ಬೇರೆ ಯಾವುದೇ ಸಂಬಂಧವಿಲ್ಲ’ ಎಂದು ವಕೀಲರು ಖಾಸಗಿ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ