ಸಿಎಂ ಅಪಾಯಿಂಟ್ ಮೆಂಟ್ ತೆಗೆದುಕೊಂಡ ಬೆನ್ನಲ್ಲೇ ಚಿತ್ರರಂಗದ ಮಂದಿಗೆ ಹೀಗಾಗಬೇಕೇ?!

ಮಂಗಳವಾರ, 4 ಆಗಸ್ಟ್ 2020 (11:15 IST)
ಬೆಂಗಳೂರು: ಚಿತ್ರರಂಗದ ಸಮಸ್ಯೆಗಳನ್ನು ಹೇಳಿಕೊಳ್ಳಲು ಮತ್ತು ಪರಿಹಾರ ಪ್ಯಾಕೇಜ್ ಗೆ ಮನವಿ ಮಾಡಲು ಸಿಎಂ ಯಡಿಯೂರಪ್ಪನವರನ್ನು ಭೇಟಿಯಾಗಬೇಕು ಎಂದು ಶಿವರಾಜ್ ಕುಮಾರ್ ನೇತೃತ್ವದ ಚಿತ್ರರಂಗದ ಬಳಗ ತೀರ್ಮಾನಿಸಿದಾಗಲೇ ಹೀಗಾಗಬೇಕೇ?


ಸಿಎಂ ಯಡಿಯೂರಪ್ಪನವರಿಗೆ ಈಗ ಕೊರೋನಾ ಸೋಂಕು ತಗುಲಿದ್ದು, ಸದ್ಯಕ್ಕೆ ಯಾವುದೇ ಮೀಟಿಂಗ್ ಮಾಡುವ ಸ್ಥಿತಿಯಲ್ಲಿಲ್ಲ. ಇದಕ್ಕೂ ಮೊದಲು ಶಿವಣ್ಣ ಮನೆಯಲ್ಲಿ ಸಭೆ ಸೇರಿದ್ದ ಚಿತ್ರರಂಗದ ಗಣ್ಯರು ಇಂದು ಸಿಎಂ ಭೇಟಿಯಾಗಲು ನಿರ್ಧರಿಸಿತ್ತು.

ಆದರೆ ಈಗ ಅದಕ್ಕೆ ಕೊರೋನಾ ಅಡ್ಡಿಯಾಗಿದೆ. ಸಿಎಂ ಗುಣಮುಖರಾಗುವವರೆಗೂ ಸ್ಯಾಂಡಲ್ ವುಡ್ ನಿಯೋಗಕ್ಕೆ ಸಮಸ್ಯೆ ಪರಿಹಾರ ಸಾಧ್ಯವಿಲ್ಲದಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ