ಜಾಧವ್ ವಿರುದ್ಧ ಖರ್ಗೆ ಸಿಡಿಸಿದ್ರು ಹೊಸ ಬಾಂಬ್!

ಭಾನುವಾರ, 5 ಮೇ 2019 (20:05 IST)
ಮಂತ್ರಿ ಸ್ಥಾನ ಬೇಡ. ನಿಗಮ ಮಂಡಳಿ ಸ್ಥಾನ ಸಿಕ್ಕರೆ ಸಾಕು. ಹೀಗಂತ ಉಮೇಶ್ ಜಾಧವ್ ಹೇಳಿದ್ದರು ಅಂತ ಖರ್ಗೆ ಆರೋಪ ಮಾಡಿದ್ದಾರೆ.

ಉಪ ಚುನಾವಣೆಯಲ್ಲಿ ಆರೋಪ- ಪ್ರತ್ಯಾರೋಪಗಳು ಜೋರಾಗಿ ಕೇಳಿಬರುತ್ತಿವೆ. ಚಿಂಚೋಳಿ ವಿಧಾನಸಭೆ ಉಪಚುನಾವಣೆಗೆ ಕಾರಣವಾದ ಜಾಧವ್ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಶಾಸಕ ಉಮೇಶ್ ಜಾಧವ್ ವಿರುದ್ಧ ಕಲಬುರಗಿಯಲ್ಲಿ ಸಚಿವ ಪ್ರೀಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ. ಉಮೇಶ್ ಜಾಧವ್ ಚಿಂಚೋಳಿ ಜನರ ಆಶೀರ್ವಾದ ಮಾರಾಟ ಮಾಡಿಕೊಂಡಿದ್ದಾರೆ. ಚಿಂಚೋಳಿಗೆ ಹೋಗಲು ಮೊದಲು ನಮಗೆ ವಿಸಾ-ಪಾಸ್‌ಪೋಟ್೯ ಬೇಕಾಗ್ತಿತ್ತು ಎಂದು ಟೀಕೆ ಮಾಡಿದ್ರು.

ನಾನು ಚಿಂಚೋಳಿಗೆ ಬರುತ್ತೇನೆ ಎಂದರೆ ಜಾಧವ್ ಬೇಡ ಅಂತಿದ್ರು. ಜಾಧವ್‌ ಅವರೇ ಮಂತ್ರಿ ಸ್ಥಾನ ಬೇಡ, ಯಾವುದಾದರೊಂದು ನಿಗಮ ಮಂಡಳಿ ಸ್ಥಾನ ಸಿಕ್ರೆ ಸಾಕು ಎಂದಿದ್ದರು ಅಂತ ಖರ್ಗೆ ಹೇಳಿದ್ರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ