ಮಾಜಿ ಸಿಎಂಗೆ ಇದೆಂತಹಾ ದುಃಸ್ಥಿತಿ: ಬೊಮ್ಮಾಯಿ ಕಾಲೆಳೆದ ಕಾಂಗ್ರೆಸಿಗರು

Sampriya

ಶನಿವಾರ, 16 ಮಾರ್ಚ್ 2024 (18:44 IST)
Photo Courtesy Facebook
ಬೆಂಗಳೂರು: ಹಾವೇರಿ- ಗದಗದ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಣಕ್ಕಿಳಿದಿರುವ ಅವರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. 
 
ಈ ವೇಳೆ ಮಾಜಿ ಸಚಿವ ಬಿ.ಸಿ.ಪಾಟೀಲ್ ಅವರನ್ನು ಭೇಟಿಯಾಗಿ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಕೋರಿ ತಲೆ ಬಗ್ಗಿಸಿ ನಮಸ್ಕರಿದ್ದರು.  ಈ ವಿಡಿಯೋ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿ, ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ಕಾಲೆಳೆದಿದೆ. 
 
ಛೇ ಇದೆಂತಹಾ ದುಃಸ್ಥಿತಿ ಬಸವರಾಜ ಬೊಮ್ಮಾಯಿ ಅವರೇ, 
ಮಾಜಿ ಮುಖ್ಯಮಂತ್ರಿಯಾಗಿ ವಯಸ್ಸಿನಲ್ಲಿ ಹಿರಿಯರಾಗಿ ಕಿರಿಯ ವಯಸ್ಸಿನ ಬಿಸಿ ಪಾಟೀಲ್ ಕಾಲೀಗೆ ಬೀಳುವುದೇ? ಗೋ ಬ್ಯಾಕ್ ಬೊಮ್ಮಾಯಿ ಅಭಿಯಾನ ಶುರು ಆಗದಿರಲಿ ಎಂದು ಆ್ಯಂಟಿಸಪೇಟರಿ ಬೇಲ್ ತೆಗೆದುಕೊಳ್ಳುವುದಾ ಅಥವಾ ಟಿಕೆಟ್ ವಂಚಿತ ಪಾಟೀಲ್ ಅವರನ್ನು ಓಲಯಸಿಕೊಳ್ಳುವುದಾ? ಬೊಮ್ಮಾಯಿಯವರ ಇಂತಹಾ ಶರಣಾಗತಿ ಸ್ಥಿತಿ ದಯನೀಯವಾಗಿದೆ ಎಂದು ಟ್ವೀಟ್ ಮಾಡಿ ಕಾಲೆಳೆದಿದೆ. 
 
ಬಸವರಾಜ ಅವರು ಮುಖ್ಯಮಂತ್ರಿ ಅವಧಿಯಲ್ಲಿ ಬಿ.ಸಿ.ಪಾಟೀಲ್ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಅಲ್ಲದೆ ಲೋಕಸಭೆ ಚುನಾವಣೆಯಲ್ಲಿ ಹಾವೇರಿ– ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು.
 
 
ಕುಟುಂಬದವರು ಹಾಗೂ ಚಿತ್ರದ ಗಣ್ಯರ ಸಮ್ಮುಖದಲ್ಲಿ ಹವ್ಯವಾಹಿನಿ ಮತ್ತು ನಿಶಾಂತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಗೂ ಮುನ್ನೂ ಅದ್ಧೂರಿ ಸಂಗೀತ, ಮೆಹೆಂದಿ ಸಮಾರಂಭ ನಡೆಯಿತು.
 
ಹವ್ಯವಾಹಿನಿ ಅವರು ಸಾಂಪ್ರದಾಯಿಕ ಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚಿದರೆ ನಿಶಾಂತ್ ದಂತದ ಶೇರ್ವಾನಿಯಲ್ಲಿ ಗಮನ ಸೆಳೆದರು.  ಈ ಜೋಡಿ ಅಕ್ಟೋಬರ್ 2023ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ