100% ಬಿಜೆಪಿ ಬಿಡಲ್ಲ, ನನ್ನ ಮಗ ರಾಜಕೀಯಕ್ಕೆ ಬರಲ್ಲ : ಸೋಮಶೇಖರ್

ಶುಕ್ರವಾರ, 25 ಆಗಸ್ಟ್ 2023 (08:57 IST)
ಬೆಂಗಳೂರು : ಕಾಂಗ್ರೆಸ್ಗೆ ವಾಪಸ್ ಹೋಗೋ ಬಗೆಗಿನ ವದಂತಿ ಬಗ್ಗೆ ಮಾಜಿ ಸಚಿವ ಎಸ್.ಟಿ ಸೋಮಶೇಖರ್ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ನಾನು ಕಾಂಗ್ರೆಸ್ಗೆ ಹೋಗಲ್ಲ, 100% ಲೋಕಸಭೆಗೂ ಹೋಗಲ್ಲ, ನನ್ನ ಮಗನೂ 100% ರಾಜಕೀಯಕ್ಕೆ ಬರಲ್ಲ ಅಂತಾ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿ, ಕೆಲವರು ಶಾಸಕರಾಗಬೇಕು ಅಂತ ಕನಸು ಕಾಣ್ತಿದ್ದಾರೆ, ಸುಮ್ಮನೆ ವದಂತಿ ಹಬ್ಬಿಸ್ತಿದ್ದಾರೆ. ಸಿಎಂ, ಡಿಸಿಎಂ ನಮ್ಮ ಕ್ಷೇತ್ರಕ್ಕೆ ಬಂದಾಗ ಮಾಡಿರುವ ಕೆಲಸದ ಬಗ್ಗೆ ಒಳ್ಳೆ ಮಾತನಾಡಬಾರದು ಅಂದ್ರೆ ಹೇಗೆ? ಅಂತ ವಿರೋಧಿಗಳಿಗೆ ಟಕ್ಕರ್ ಕೊಟ್ಟಿದ್ದಾರೆ.

ಆರ್ಆರ್ ನಗರ, ಕೆಆರ್ಪುರದಲ್ಲಿ ಬೆಂಬಲಿಗರು ಕಾಂಗ್ರೆಸ್ಗೆ ಹೋದಂತೆ ನನ್ನ ಕ್ಷೇತ್ರದಲ್ಲೂ ಹೋಗಿದ್ದಾರೆ ಅಷ್ಟೇ. ಆದರೆ, ನನ್ನ ಮೇಲ್ಯಾಕೆ ಇಷ್ಟು ಸಂಶಯ? ಅಂತ ಪ್ರಶ್ನಿಸಿದ್ದಾರೆ. ದೆಹಲಿಗೆ ಹೋಗಲು ಇನ್ನೂ ಬುಲಾವ್ ಬಂದಿಲ್ಲ ಅಂತಲೂ ಸೋಮಶೇಖರ್ ಹೇಳಿದ್ದಾರೆ. 

ನಮಗೆ ಮೆಜಾರಿಟಿ ಇಲ್ಲದಿದ್ದಾಗ ಬಿಎಸ್ವೈ 10 ಶಾಸಕರನ್ನು, ನಾನು 5 ಶಾಸಕರನ್ನು ಆಪರೇಷನ್ ಮಾಡಿದ್ವಿ. ಕಾಂಗ್ರೆಸ್ನವರಿಗೆ ಮೆಜಾರಿಟಿ ಇದ್ರೂ ಯಾಕೆ ಆಪರೇಷನ್ ಮಾಡ್ತಿದ್ದಾರೆ ಅಂತ ಅಶೋಕ್ ಕಿಡಿಕಾರಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ