1001 ಗಣಪ ಮೂರ್ತಿ ವಿತರಣೆಗೆ 'ಸೈನಿಕ' ಸಜ್ಜು

ಶನಿವಾರ, 13 ಆಗಸ್ಟ್ 2022 (21:04 IST)
ಮುಂಬರುವ ವಿಧಾನಸಭಾ ಚುನಾವಣೆಗೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಭರ್ಜರಿಯಾಗಿ ಸಿದ್ಧತೆ ನಡೆಸುತ್ತಿದ್ದಾರೆ.. ಹೆಚ್.ಡಿ.ಕುಮಾರಸ್ವಾಮಿಗೆ ಸೆಡ್ಡು ಹೊಡೆಯಲು ಸಿ.ಪಿ.ಯೋಗೇಶ್ವರ್ ಹೊಸ ಪ್ಲ್ಯಾನ್​​ ಮಾಡಿದ್ದಾರೆ. ಆಗಸ್ಟ್ ಕೊನೆಯಲ್ಲಿ ಗೌರಿ-ಗಣೇಶ ಹಬ್ಬ ಇರುವ ಹಿನ್ನೆಲೆಯಲ್ಲಿ ಚನ್ನಪಟ್ಟಣದಲ್ಲಿ 1001 ಗಣಪತಿ ಮೂರ್ತಿ ವಿತರಿಸಲು ಯೋಗೇಶ್ವರ್ ಮುಂದಾಗಿದ್ದಾರೆ. ಇದೇ ಮೊದಲ ಬಾರಿಗೆ ಗಣಪತಿ ಮೂರ್ತಿಯನ್ನು ವಿತರಿಸುತ್ತಿದ್ದು, ಈ ಮೂಲಕ ಮತದಾರರನ್ನು ತಮ್ಮತ್ತ ಸೆಳೆಯುವ ರಣತಂತ್ರ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ