ಕೆ.ಎಸ್.ಆರ್.ಟಿ.ಸಿ ಗೆ 1500 ಕೋಟಿ ರೂ. ನಷ್ಟ
ಕೊರೊನಾ ಹಿನ್ನೆಲೆಯಲ್ಲಿ ಘೊಷಣೆಯಾಗಿದ್ದ ಲಾಕ್ ಡೌನ್ ಸಂಧರ್ಭದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸಾವಿರಾರು ಕೋಟಿ ರೂ. ನಷ್ಟವಾಗಿದೆ.
ಸಂಸ್ಥೆಗೆ ಆಗಿರುವ ನಷ್ಟ ತುಂಬಿಕೊಡುವ ಹಿನ್ನೆಲೆಯಲ್ಲಿ ಸರ್ಕಾರ 1300 ಕೋಟಿ ರೂಪಾಯಿ ಅನುದಾನ ನೀಡಿದೆ. ಈ ಅನುದಾನವನ್ನು ಸಿಬ್ಬಂದಿ ಸಂಬಳ ಮತ್ತು ನಿರ್ವಹಣೆಗೆ ವಿನಿಯೋಗ ಮಾಡಿ ಕೊಳ್ಳಲಾಗಿದೆ ಎಂದರು.
ನಿಗಮವು ಬಹಳ ಕಷ್ಟ ಅನುಭವಿಸುತ್ತಿರುವ ಈ ದಿನಗಳಲ್ಲಿ ಪ್ರತಿಯೊಬ್ಬರೂ ಸಂಸ್ಥೆಗೆ ಏನಾದರೂ ಒಳ್ಳೆಯದನ್ನು ಮಾಡುವ ಚಿಂತನೆ ಮಾಡಿ. ಇನ್ನಷ್ಟೂ ದಕ್ಷತೆಯಿಂದ ದುಡಿಯಬೇಕು. ಪ್ರಯಾಣಿಕರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ಇರಬೇಕು. ಸಂಸ್ಥೆಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿದೆ ಎಂದರು.