43 ಸಾಧಕರಿಗೆ ಹ್ಯೂಮ್ಯಾನಿಟಿ ಅವಾರ್ಡ್ 2020 ಪ್ರಶಸ್ತಿ ಪ್ರದಾನ

ಭಾನುವಾರ, 19 ಸೆಪ್ಟಂಬರ್ 2021 (20:42 IST)
ಬೆಂಗಳೂರು: ವಿ.ವಿ.ಎಸ್.ಪಿ ಮೀಡಿಯಾ ಮತ್ತು ರೈತಗೀತೆ ಯುಟ್ಯೂಬ್ ವಾಹಿನಿಯು ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಅವಿರತ ಮತ್ತು ನಿಸ್ವಾರ್ಥ ಸೇವೆ ಸಲ್ಲಿಸಿದ 43 ಸಾಧಕರಿಗೆ  ಹ್ಯೂಮ್ಯಾನಿಟಿ ಅವಾರ್ಡ್ 2020 ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರಿನ ಇ.ಎಸ್.ಐ ಆಸ್ಪತ್ರೆಯ ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ. ಗಿರೀಶ್ ಎಂ.ಎಸ್. ಹಾಗೂ  ಮತ್ತಿತರಿಗೆ ಹ್ಯೂಮ್ಯಾನಿಟಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
ಇದೇ ವೇಳೆ ಆಹ್ವಾನ್ ಪ್ರತಿಷ್ಠಾನದಿಂದ ಒಂದು ಕೋಟಿ ಗಿಡ ನೆಡುವ ಬೃಹತ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಬಿಬಿಎಂಪಿ ಸದಸ್ಯ ದಾಸೇಗೌಡ, ಡಾ. ಅಂಜನಪ್ಪ, ಡಾ. ರಾಜು, ನಟಿ ಪಾವನಗೌಡ, ವಿಬಿಎಸ್ಪಿ ಮೀಡಿಯಾ ಅಧ್ಯಕ್ಷೆ ವಿಬಿಎಸ್‍ಪಿ ಕುಸುಮ ಶೆಟ್ಟಿ, ಆಹ್ವಾನ್ ಫೌಂಡೇಶನ್ ಅಧ್ಯಕ್ಷ ಬ್ರಿಜಾ ಕಿಶೋರ್ ಪ್ರಧಾನ್,  ಬಿಜೆಪಿ ವಿಜಯನಗರ ಮಂಡಲ ಅಧ್ಯಕ್ಷ ಕೃಷ್ಣ, ರೋಟರಿಯನ್ ಭಾಸ್ಕರನ್, ಸೋಮಶೇಖರ್, ಎಸ್.ಎಸ್. ಡೆವಲಪರ್ಸ್ ಅಧ್ಯಕ್ಷ ಸೂರಿ ಮರಾಡೆ ಭಾಗವಹಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ