ಮಂಗಳೂರು: ನಮ್ಮ ಇಡೀ ಕುಟುಂಬ ಧರ್ಮಸ್ಥಳದಲ್ಲಿ ಹುಟ್ಟಿ ಬೆಳೆದಿರುವುದಕ್ಕೆ ಪುಣ್ಯ ಮಾಡಿದ್ದೇವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ನಡೆದ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಎಷ್ಟೋ ದೂರದವರು ಬಂದರೂ ಹತ್ತಿರದವರು ಯಾಕೆ ಬರ್ತಿಲ್ಲ ಎಂಬ ಮಾತಿತ್ತು. ಇವತ್ತು ನಮ್ಮವವರೆಲ್ಲಾ ಇಲ್ಲಿಗೆ ಬಂದಿದ್ದೀರಾ ಎಂದು ನುಡಿದಿದ್ದಾರೆ.
ಧರ್ಮಸ್ಥಳದಲ್ಲಿ ಇಂತಹ ಕುಟುಂಬದಲ್ಲಿ ಹುಟ್ಟಿರುವುದಕ್ಕೆ ಅದೃಷ್ಟಮಾಡಿದ್ದೇವೆ. ಈ ಕಾರಣದಿಂದ ನಿಮಗೆ ನಮ್ಮ ಮೇಲೆ ಪ್ರೀತಿ ಅಭಿವ್ಯಕ್ತವಾಯಿತು. ಇಷ್ಟು ದಿನ ಪ್ರೀತಿ ಇದ್ದರೂ ಅಭಿವ್ಯಕ್ತಪಡಿಸಲು ಅವಕಾಶ ಇರಲಿಲ್ಲ ಎಂದಿದ್ದಾರೆ.
ಎಸ್ಐಟಿ ತನಿಖೆಯಿಂದ ಅನೇಕ ವಿಷಯಗಳು ಹೊರಗೆ ಬರ್ತಾ ಇದೆ. ಆ ಎಲ್ಲಾ ತನಿಖೆಯ ವಿಷಯಗಳು ನಮಗೆ ಪೂರಕವಾಗಿರಲಿ. ಮಂಜುನಾಥ ಸ್ವಾಮಿಯ ಅನುಗ್ರಹ ಎಲ್ಲರ ಮೇಲೆ ಹೀಗೆಯೇ ಇರಲಿ ಎಂದು ನುಡಿದಿದ್ದಾರೆ.