ರಸ್ತೆ ಗುಂಡಿಗೆ ಬಿದ್ದು ಕತ್ತು- ಭುಜದ ಮೂಳೆ ಮುರಿದುಕೊಂಡ ಬೈಕ್ ಸವಾರ

ಭಾನುವಾರ, 23 ಅಕ್ಟೋಬರ್ 2022 (20:23 IST)
ಬೆಂಗಳೂರಿನಲ್ಲಿ  ಗುಂಡಿ ಗಂಡಾಂತರ ನಿಲ್ಲದಂತಾಗಿದ್ದು, ರಸ್ತೆ ಗುಂಡಿಗೆ ಬಿದ್ದು ಕತ್ತು- ಭುಜದ ಮೂಳೆ ಮುರಿದುಕೊಂಡ ಬೈಕ್ ಸವಾರ, ಆಸ್ಪತ್ರೆಗೆ ದಾಖಲಾಗಿದ್ದಾರೆ. ಯಶವಂತಪುರ ಕ್ಷೇತ್ರದ ಬಿಇಎಲ್ ಸರ್ಕಲ್ ಬಳಿ ಗುಂಡಿಗೆ ಬಿದ್ದು ಜೆಸಿ ನಗರದ ನಿವಾಸಿ  ಬಾಲಾಜಿ ತೀವ್ರ ಪೆಟ್ಟು ಮಾಡಿಕೊಂಡಿದ್ದಾರೆ.  ನಿನ್ನೆ ಬೆಳಗ್ಗೆ 8 ಘಂಟೆಗೆ ಘಟನೆ ನಡೆದಿದೆ. ಕತ್ತು- ಭುಜದ ಭಾಗ, ಕಾಲಿಗೆ ತೀವ್ರ ನೋವು ಕಾಣಿಸಿಕೊಂಡ ಪರಿಣಾಮ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಕಾಲಿಗೂ ಹೊಡೆತ ಬಿದ್ದ ಹಿನ್ನಲೆ, ನಡೆದಾಡಲು ಆಗದೇ ವೀಲ್ ಚೇರ್  ಮೂಲಕವೇ ಓಡಾಡುವ ಪರಿಸ್ಥಿತಿ ಎದುರಾಗಿದೆ. ನನ್ನ ಈ ಸ್ಥಿತಿಗೆ ಬಿಬಿಎಂಪಿ, ಸರ್ಕಾರನೇ ಕಾರಣ, ನನ್ನ ಸ್ಥಿತಿ ಯಾರಿಗೂ ಬಾರದಿರಲಿ, ಸರ್ಕಾರ ಕೂಡಲೇ ಗುಂಡಿಗಳನ್ನ ಮುಚ್ಚಲಿ ಎಂದು  ಬಾಲಾಜಿ ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ