ಗನ್‌ ಮ್ಯಾನ್‌ ಕೈಗೆ ಶೂ ಕೊಟ್ಟು ದರ್ಪ ಮೆರೆದ ಕಾಂಗ್ರೆಸ್‌ ಶಾಸಕ

ಸೋಮವಾರ, 24 ಜೂನ್ 2019 (12:43 IST)
ಹುಬ್ಬಳ್ಳಿ : ಕಾಂಗ್ರೆಸ್‌ ಶಾಸಕರೊಬ್ಬರು ಗನ್‌ ಮ್ಯಾನ್‌ ಕೈಗೆ ತಮ್ಮ ಶೂವನ್ನು  ಕೊಟ್ಟು ದರ್ಪ ತೋರಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.



ನಿನ್ನೆ ಹುಬ್ಬಳ್ಳಿಯ ಮಂಟೂರು ರಸ್ತೆಯ ಅರಳಿಕಟ್ಟೆ ಓಣಿಯಲ್ಲಿ, ರಸ್ತೆ ಸಂಪೂರ್ಣವಾಗಿ ನೀರಿನಿಂದ ತುಂಬಿ ಹೋಗಿತ್ತು. ಅಂದು ಸಂಜೆ ಮಳೆಯಿಂದ ಹಾನಿಯಾದ ಪ್ರದೇಶದ ವೀಕ್ಷಣೆ ಗೆ ತೆರಳಿದ್ದ ಕಾಂಗ್ರೆಸ್‌ ಶಾಸಕ ಪ್ರಸಾದ್‌ ಅಬ್ಬಯ್ಯ ಅವರು  ತಮ್ಮ ಶೂ ಅನ್ನು ಗನ್‌ ಮ್ಯಾನ್‌ ಕೈಗೆ ನೀಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.


ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಪ್ರಸಾದ್‌ ಅಬ್ಬಯ್ಯ ಅವರು,  ಗನ್‌ ಮ್ಯಾನ್‌ ಕೈಗೆ ನಾನು ಶೂ ಕೊಟ್ಟಿಲ್ಲ. ಅವರೇ ಸಂತೋಷದಿಂದ ಆ ಕೆಲಸ ಮಾಡಿದ್ದಾರೆ. ಯಾರೋ ನನಗೆ ಆಗದವರು ನನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಲು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ