ಸಿಎಂ ಭೇಟಿ ಮಾಡಿದ ಎಫ್‌ಕೆಸಿಸಿಐ ಮತ್ತು ಕಾಸಿಯಾ ಸಂಸ್ಥೆಗಳ ನಿಯೋಗ

ಶನಿವಾರ, 24 ಜೂನ್ 2023 (16:52 IST)
ವಿದ್ಯುತ್ ದರ ಹೆಚ್ಚಳಕ್ಕೆ ಕೈಗಾರಿಕೆ ಮತ್ತು ವಾಣಿಜ್ಯ ವಲಯ ವಿರೋಧ ವಿಚಾರವಾಗಿ ಸಿಎಂರನ್ನ ಎಫ್‌ಕೆಸಿಸಿಐ ಮತ್ತು ಕಾಸಿಯಾ ಸಂಸ್ಥೆಗಳ ನಿಯೋಗ ಭೇಟಿ ಮಾಡಿದೆ.ವಿದ್ಯುತ್ ದರ ಇಳಿಕೆ, ತೆರಿಗೆ ಇಳಿಕೆಗೆ ಒತ್ತಾಯ ಮಾಡಿದೆ.ನಿನ್ನೆ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿದ್ದ ಕೈಗಾರಿಕೆ ಮತ್ತು ವಾಣಿಜ್ಯ ವಲಯದಿಂದ ಸಿಎಂ ಭೇಟಿ ಮಾಡಲಾಗಿದೆ.
 
ಇನ್ನೂ ಸಿಎಂ ಭೇಟಿ ಬಳಿಕ ಎಫ್‌ಕೆಸಿಸಿಐ ಅದ್ಯಕ್ಷ ಬಿ ವಿ ಗೋಪಾಲರೆಡ್ಡಿ ಪ್ರತಿಕ್ರಿಯಿಸಿದ್ದು,ನಾವು ವಿದ್ಯುತ್ ದರ ಹೆಚ್ಚಳ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇವೆ.ಸೋಮವಾರ ಮತ್ತೊಂದು ಸಭೆ ಕರೆಯೋದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ.ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಭೆ ಕರೆದಿದ್ದಾರೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ