ಮೈತ್ರಿ ಪಕ್ಷಗಳ ಮುಖಂಡರ ಜಂಟಿ ಪ್ರಚಾರ

ಸೋಮವಾರ, 29 ಅಕ್ಟೋಬರ್ 2018 (19:11 IST)
ರಾಜ್ಯದಲ್ಲಿ ಉಪಚುನಾವಣೆ ಕಾವು ರಂಗೇರುತ್ತಿರುವಂತೆ ಪ್ರಚಾರದ ಅಬ್ಬರವೂ ಜೋರಾಗುತ್ತಿದೆ. ಏತನ್ಮಧ್ಯೆ ಆಡಳಿತಾರೂಢ ಕಾಂಗ್ರೆಸ್ – ಜೆಡಿಎಸ್ ವರಿಷ್ಠರು ಜಂಟಿ ಪ್ರಚಾರ ಆರಂಭಿಸಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಬಳ್ಳಾರಿಯಲ್ಲಿ ಜಂಟಿ ಪ್ರಚಾರ ಕೈಗೊಂಡರು. ನ.3 ರಂದು ಉಪಚುನಾವಣೆ ನಡೆಯಲಿದೆ.

ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು ಹೇಗಾದರೂ ಮಾಡಿ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲೇಬೇಕು ಎಂದು ಪಣ ತೊಟ್ಟಿದ್ದಾರೆ.

ಹೀಗಾಗಿ ಒಂದೇ ವೇದಿಕೆಯನ್ನು ಸಿದ್ದರಾಮಯ್ಯ, ದೇವೇಗೌಡರು ಹಂಚಿಕೊಳ್ಳುವ ಮೂಲಕ ಮೈತ್ರಿ ಸರಕಾರದ ಅಭ್ಯರ್ಥಿಗಳ ಗೆಲುವಿಗೆ ದೃಢಸಂಕಲ್ಪ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ