ಕಾಂಗ್ರೆಸ್ ಪ್ರಣಾಳಿಕೆ ಕುರಿತು ಮೊಯ್ಲಿ ನೇತೃತ್ವದಲ್ಲಿ ಮಹತ್ವದ ಸಭೆ

ಸೋಮವಾರ, 11 ಡಿಸೆಂಬರ್ 2017 (19:00 IST)
ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ವೀರಪ್ಪ ಮೊಯ್ಲಿ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಪ್ರಣಾಳಿಕೆ ಸಮಿತಿಯ ಮಹತ್ವದ ಸಭೆ ನಡೆದಿದೆ.

ಸಮಿತಿ ಸದಸ್ಯರಾದ ವಿ.ಆರ್.ಸುದರ್ಶನ್, ಬಿ.ಎಲ್.ಶಂಕರ್, ಮುಖಂಡರಾದ ಪುಷ್ಪಾ ಅಮರನಾಥ್, ಜಿ.ಕೃಷ್ಣಪ್ಪ ಇತರರು ಪ್ರಣಾಳಿಕೆ ಸಿದ್ದತೆಯ ಕುರಿತು ಚರ್ಚೆ ನಡೆಸಿದರು. 

ಕೈಗಾರಿಕೆ, ಕೃಷಿ, ತ್ಯಾಜ್ಯ ವಿಲೇವಾರಿ ಸೇರಿದಂತೆ ವಿವಿಧ ವಿಷಯಗಳ ಪ್ರತ್ಯೇಕ ಸಭೆಗಳನ್ನು ನಡೆಸಿ ಪ್ರಣಾಳಿಕೆಯಲ್ಲಿ ಅಳವಡಿಸುವ ಬಗ್ಗೆ ಚರ್ಚಿಸಲಾಗಿದೆ.

ಮೊಯ್ಲಿ ಅವರು ಆರು ಪ್ರದೇಶವಾರುಗಳ ಸಭೆ ನಡೆಸಿ ಪ್ರಣಾಳಿಕೆ ರೂಪಿಸಲಿದ್ದಾರೆ. ಈಗಾಗಲೇ ಮಂಗಳೂರು, ಹುಬ್ಬಳ್ಳಿ ಸಭೆ ನಡೆಸಿದ್ದಾರೆ. ಈಗ ಬೆಂಗಳೂರಿನಲ್ಲೂ ಸಭೆ ಪೂರ್ಣಗೊಳಿಸಿದ್ದಾರೆ.
 
ಜನವರಿ ಅಂತ್ಯಕ್ಕೆ ಪ್ರಣಾಳಿಕೆ ಕರಡು ತಯಾರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರೊಂದಿಗೆ ಚರ್ಚಿಸಿ ಹೈಕಮಾಂಡ್‍ಗೆ ಕಳುಹಿಸಲಾಗುತ್ತದೆ. ವಿಭಾಗವಾರು ಯೋಜನೆ ರೂಪಿಸಿ ಆದ್ಯತಾ ಕ್ಷೇತ್ರಗಳಿಗೆ ಪ್ರಣಾಳಿಕೆಯಲ್ಲಿ ಮನ್ನಣೆ ನೀಡಲಾಗುವುದು ಎಂದು ಮೊಯ್ಲಿ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ