ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಕ್ಕೆ ವಿದ್ಯಾರ್ಥಿಯ ಹತ್ಯೆ..!

ಶುಕ್ರವಾರ, 29 ಸೆಪ್ಟಂಬರ್ 2023 (17:22 IST)
ವಿದ್ಯಾರ್ಥಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಬೆಲಗಾವಿ  ಸಮೀಪದ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಮಲ್ಲಾಪುರ ಗ್ರಾಮದ ನಿವಾಸಿ ಪ್ರಜ್ವಲ್ ಮಲ್ಲೇಶ ಸುಂಕದ ಮೃತ ವಿದ್ಯಾರ್ಥಿ. ಪ್ರಜ್ವಲ ಪೋನಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆಂದು ಆರೋಪಿತರಾದ ಕಿಶನ್ ಬಾವನ್ನವರ, ದರ್ಶನ ಬಾವನ್ನವರ, ವಿಶಾಲ ಕಲ್ಲವಡ್ಡರ, ಶರಣ ಬಾವನ್ನವರ, ನಾಗೇಶ ಕಲ್ಲವಡ್ಡರ ಎಂಬುವವರು ಪ್ರಜ್ವಲ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಇನ್ನು ಬಾಲಾಪರಾದಿಗಳನ್ನು ವಶಕ್ಕೆ  ಪಡೆದ ಪೊಲೀಸರು ತನಿಖೆ ಮಾಡುತ್ತಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ