ಕಳ್ಳತನ ಮಾಡಿ 50 ನೇ ವರ್ಷದಲ್ಲಿ ಸೆರೆಯಾದ ಆರೋಪಿ!

geetha

ಭಾನುವಾರ, 11 ಫೆಬ್ರವರಿ 2024 (15:31 IST)
ಬೆಂಗಳೂರು : 1998 ರಲ್ಲಿ ಜಯನಗರದಲ್ಲಿ  ವಸಂತ ಎಂಬ ಗೃಹಿಣಿಯ ಸರವನ್ನು ಎಗರಿಸಿ ಗುಲಾಬ್‌ ಖಾನ್‌ ಪರಾರಿಯಾಗಿದ್ದ. ಅಂದಿನಿಂದ ಇಂದಿನವರೆಗೆ ಒಂದೇ ಒಂದು ಅಪರಾಧ ಪ್ರಕರಣದಲ್ಲಿ ಭಾಗಿಯಾಗದೇ ವೆಲ್ಡಿಂಗ್‌ ಕೆಲಸ ಮಾಡಿಕೊಂಡಿದ್ದ. ಆದರೆ ಈತ 26 ವರ್ಷಗಳ ಹಿಂದೆ ಸರಗಳವು ಮಾಡಿ ಪರಾರಿಯಾಗಿದ್ದ. ಕಳ್ಳತನ ಪ್ರಕರಣವೊಂದರ ಆರೋಪಿ ಬರೋಬ್ಬರಿ 26 ವರ್ಷಗಳ ನಂತರ ಬಂಧನಕ್ಕೊಳಗಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಗುಲಾಬ್‌ ಖಾನ್‌ ಬಂಧಿತ ಆರೋಪಿ. ಆದರೆ ಇತ್ತೀಚಿಗಷ್ಟೇ ಜಯನಗರ ಪೊಲೀಸರಿಗೆ ಗುಲಾಬ್‌ ಖಾನ್‌ ಸುಳಿವು ಸಿಕ್ಕಿತ್ತು . ರಾಮನಗರಕ್ಕೆ ತೆರಳಿ ಗುಲಾಬ್‌ ಖಾನ್‌ ನನ್ನು ಬಂಧಿಸಿರುವ ಪೊಲೀಸರು ಪ್ರಕರಣವನ್ನು ರಿಓಪನ್‌ ಮಾಡಿ ಕೋರ್ಟಿಗೆ ಆರೋಪಿಯನ್ನು ಹಾಜರುಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ