ಮುನಿರತ್ನಗೆ ಪಟಾಕಿ ಸಿಡಿಸಿ ,ಹಾರ ಹಾಕಿ ಸ್ವಾಗತಕೋರಿದ ಕಾರ್ಯಕರ್ತರು

ಸೋಮವಾರ, 17 ಏಪ್ರಿಲ್ 2023 (15:16 IST)
ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಯಶವಂತಪುರದ ಜೆಪಿ ಪಾರ್ಕ್ ವಾರ್ಡ್‌ನ ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ,ಪೂಜೆ ಸಲ್ಲಿಸಿ, ದೇವಿಯ ದರ್ಶನ ಪಡೆದರು.ಬಿಜೆಪಿ ಅಭ್ಯರ್ಥಿ ಮುನಿರತ್ನ ಇಂದು ನಾಮಪತ್ರ ಸಲ್ಲಿಸುತ್ತಿದ್ದಾರೆ.ನೂರಾರು ಬೆಂಬಲಿಗರು, ಕಾರ್ಯಕರ್ತರು ಭಾಗಿಯಾಗಿ, ಬೈಕ್ ರ್ಯಾಲಿ ಮೂಲಕ ತೆರಳಲು ಸಿದ್ದತೆ ಮಾಡಿಕೊಂಡಿದ್ದಾರೆ.ಪಟಾಕಿ ಸಿಡಿಸಿ, ಹಾರ ಹಾಕಿ  ಬೆಂಬಲಿಗರು, ಕಾರ್ಯ ಕರ್ತರು ಸ್ವಾಗತಕೋರಿದರು.ಆರ್ ಆರ್ ನಗರ ದ ಚುನಾವಣಾ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.ಯಶವಂತಪುರ, ಗೊರಗುಂಟೆಪಾಳ್ಯ, ಎಚ್ ಎಂಟಿ, ಲಗ್ಗೇರಿ. ಸುಮನಹಳ್ಳಿ. ಮೈಸೂರು ರೋಡ್ ಮೂಲಕ , ಆರ್ ಆರ್ ನಗರ ಕ್ಕೆ ಎಂಟ್ರಿಕೊಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ