ನಿಧಿಗಾಗಿ ನವವೃಂದಾವನ ನಾಶ – ನಟ ಜಗ್ಗೇಶ್ ಆಕ್ರೋಶ

ಗುರುವಾರ, 18 ಜುಲೈ 2019 (16:14 IST)
ನಿಧಿ ಆಸೆಗಾಗಿ ಪವಿತ್ರ ಸ್ಥಳವನ್ನು ದುಷ್ಕರ್ಮಿಗಳು ಅಗೆದು ಹಾಳು ಮಾಡಿರೋದಕ್ಕೆ ನಟ ಜಗ್ಗೇಶ್ ಕಿಡಿಕಾರಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿರೋ ಗಂಗಾವತಿ ತಾಲೂಕಿನ ಆನೆಗುಂದಿ ಹತ್ತಿರ ಇರೋ ನವವೃಂದಾವನನ್ನು ಅಗೆದು ಹಾಳು ಮಾಡಲಾಗಿದೆ. ಇದು ನಿಧಿ ಆಸೆಗಾಗಿ ಮಾಡಿರೋದು ಅಂತ ಹೇಳಲಾಗ್ತಿದೆ.

ಶ್ರೀ ರಾಘವೇಂದ್ರ ಸ್ವಾಮಿಗಳು ಭಕ್ತರಾಗಿರೋ ನಟ ಜಗ್ಗೇಶ್ ಘಟನೆಯನ್ನು ಖಂಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ್ದಾರೆ. ನವವೃಂದಾನವನ್ನು ಅಗೆದವರು ಹಾಳಾಗಿ, ಅವರು ಸರ್ವನಾಶ ಹೋಗಲಿ ಅಂತ ಹಿಡಿಶಾಪ ಹಾಕಿದ್ದಾರೆ.

ನವವೃಂದಾವನದಲ್ಲಿ ವ್ಯಾಸರಾಜರು ಸೇರಿದಂತೆ ಒಟ್ಟು ಒಂಭತ್ತು ಯತಿಗಳ ಸಮಾಧಿಗಳಿವೆ.  ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ