ವಾಸ್ತವವಾಗಿ ಕಾಂಗ್ರೆಸ್ ಪ್ರಬಲ್ಯ ಕುಸಿದಿಲ್ಲ, ಬಿಜೆಪಿ ಪ್ರಾಬಲ್ಯ ಕುಸಿದಿದೆ: ಸಿಎಂ ಸಿದ್ದರಾಮಯ್ಯ

ಶುಕ್ರವಾರ, 20 ಮೇ 2016 (14:58 IST)
ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ವಿಚಾರ "ದೇಶದಲ್ಲಿ ಕಾಂಗ್ರೆಸ್ ಬಲ ಕುಸಿದಿಲ್ಲ" ನಮ್ಮ ನಿರೀಕ್ಷೆಯಂತೆ ಫಲಿತಾಂಶ ಬಂದಿಲ್ಲವಷ್ಟೇ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
 
ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಒಟ್ಟು 65 ಸ್ಥಾನಗಳಲ್ಲಿ ಜಯಭೇರಿಯಾಗಿದ್ದು, ಒಟ್ಟಾರೆಯಾಗಿ ಕಾಂಗ್ರೆಸ್ 115 ಸ್ಥಾನಗಳಲ್ಲಿ ಜಯಭೇರಿಯಾಗಿದೆ. ಸರಿಯಾಗಿ ಹೋಲಿಕೆ ಮಾಡಿ ನೋಡಿದರೆ, ದೇಶದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಕಳೆದುಕೊಂಡಿಲ್ಲ. ಹೊರತಾಗಿ ಬಿಜೆಪಿ ಪ್ರಾಬಲ್ಯವನ್ನು ಕಳೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
 
ಆಸ್ಸಾಂ ರಾಜ್ಯ ವಿಧಾನ ಸಭೆ ಕುರಿತು ಮಾತನಾಡಿದ ಸಿದ್ದರಾಮಯ್ಯ, ಆಸ್ಸಾಂ ರಾಜ್ಯದಲ್ಲಿ ಕಾಂಗ್ರೆಸ್ 15 ವರ್ಷಗಳ ಅವಧಿಯಲ್ಲಿ ಅಧಿಕಾರ ನಡೆಸಿದೆ. ಈ ಭಾರಿ ಮತದಾರರು ಕಾಕತಾಳೀಯವಾಗಿ ಬೆಜಿಪಿ ಸರಕಾರಕ್ಕೆ ಮತ ನೀಡಿದ್ದಾರೆ. ಇದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆಯ ಸಂದೇಶವಲ್ಲ ಎಂದು ಹೇಳಿದ್ದಾರೆ.
 
ದೇವರ ನಾಡು ಕೇರಳ ರಾಜ್ಯದಲ್ಲಿ ವಾಡಿಕೆಯಂತೆ ಒಂದು ಬಾರಿ ಯುಡಿಎಫ್‌ ಒಂದು ಬಾರಿ ಎಲ್‌ಡಿಎಫ್‌ ಸರಕಾರ ಆಡಳಿತ ನಡೆಸುತ್ತದೆ. ಅದರಂತೆಯ ಈ ಬಾರಿಯು ನಡೆದಿದೆ. ಬಿಹಾರ ವಿಧಾನ ಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಿದರು ಬಿಜೆಪಿ ಅಧಿಕಾರ ಪಡೆದುಕೊಳ್ಳಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ