ಗೌರಿ-ಗಣೇಶ ಹಬ್ಬದ ಪ್ರಯುಕ್ತ ನಗರದಲ್ಲಿ ಹೆಚ್ಚುವರಿ ಬಸ್ ವ್ಯವಸ್ಥೆ

ಮಂಗಳವಾರ, 7 ಸೆಪ್ಟಂಬರ್ 2021 (19:23 IST)
ಗೌರಿ‌- ಗಣೇಶ ಹಬ್ಬ ಹಿನ್ನೆಲೆ ಬೆಂಗಳೂರಿನಿಂದ ಹೆಚ್ಚುವರಿ ಬಸ್ ಸಂಚಾರ ಆರಂಭವಾಗಿದೆ.ಸಾರಿಗೆ ಇಲಾಖೆಯಿಂದ ಹೆಚ್ಚುವರಿ‌ ಬಸ್ ಸೇವೆಗೆ ಅಸ್ತು.  8 ಹಾಗೂ 9ರಂದು 1000 ಸಾವಿರ ಬಸ್ ಗಳು ಶಿವಮೊಗ್ಗ,ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ವಿಜಯಪುರ ಧಾರವಾಡ,ಹಾಸನ, ಮಂಗಳೂರು,ಬಳ್ಳಾರಿ, ಕಲಬುರಗಿ  ಸೇರಿ ಹಲವು ಕಡೆಗೆ ಹೆಚ್ಚುವರಿ‌ ಬಸ್ ಸೇವೆ ವ್ಯವಸ್ಥೆ ಮಾಡಲಾಗಿದೆ.
 
ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಪಿರಿಯಾಪಟ್ಟಣ, ಮಡಿಕೇರಿ, ಕುಶಾಲನಗರಕ್ಕೆ ಭಾಗಕ್ಕೆ ಬಸ್ ಸಂಚಾರದ ವ್ಯವಸ್ಥೆ. ಅಂತರ್ ರಾಜ್ಯಗಳಿಗೂ ಸಹ ಸಾರಿಗೆ ಇಲಾಖೆಯಿಂದ ಹೆಚ್ಚುವರಿ ಬಸ್ ಸೇವೆ ದಿನಾಂಕ 12 ವರೆಗೆ ರಾಜ್ಯದ ವಿವಿಧ ಪ್ರದೇಶ, ಅಂತರ್ ರಾಜ್ಯಗಳಿಂದ ಹೆಚ್ಚುವರಿಯಾಗಿ ಬಸ್ ಸಂಚಾರ ವ್ಯವಸ್ಥೆ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ