ವಿಧಾನಸಭಾ ಕಲಾಪ ಮುಂದೂಡಿಕೆ; ವಿಶ್ವಾಸ ಮತದತ್ತ ಚಿತ್ತ

ಸೋಮವಾರ, 15 ಜುಲೈ 2019 (16:00 IST)
ವಿಧಾನಸಭಾ ಕಲಾಪವನ್ನು ಗುರುವಾರಕ್ಕೆ ಮುಂದೂಡಿಕೆ ಮಾಡಲಾಗಿದೆ.

ಇಂದು ಬೆಳಗ್ಗೆ ಬಿಜೆಪಿ ಹಾಗೂ ಮೈತ್ರಿ ಪಕ್ಷಗಳ ಮುಖಂಡರ ಜತೆ ಸ್ಪೀಕರ್ ರಮೇಶ್ ಕುಮಾರ ಚರ್ಚೆ ನಡೆಸಿದ್ರು.

ಉಭಯ ಕಡೆಯವರೂ ಸಹ ವಿಶ್ವಾಸ ಮತ ಯಾಚನೆಗೆ ಆದ್ಯತೆ ನೀಡಿದ್ದಾರೆ. ಹೀಗಾಗಿ ಗುರುವಾರ ಮೈತ್ರಿ ಸರಕಾರದಿಂದ ವಿಶ್ವಾಸ ಮತ ಯಾಚನೆ ನಡೆಯಲಿದೆ ಎಂದ್ರು.

ವಿರೋಧ ಪಕ್ಷವಾಗಿರೋ ಬಿಜೆಪಿ ಯಾವುದೇ ಕಾರಣಕ್ಕೂ ಇಂದಿನ ಸದನದ ಚರ್ಚೆಯಲ್ಲಿ ಪಾಲ್ಗೊಳ್ಳೋದಿಲ್ಲ ಅಂತ ಸ್ಪೀಕರ್ ಗೆ ಹೇಳಿತ್ತು. ವಿಪಕ್ಷ ಇಲ್ಲದೇ ಕಲಾಪವನ್ನ ನಡೆಸೋಕೆ ಆಗೋಲ್ಲ. ಹೀಗಾಗಿ ಕಲಾಪವನ್ನ ಮುಂದೂಡಲಾಯಿತು.

ರಾಜ್ಯ ವಿಧಾನಸಭೆಯ ಸಂಸದೀಯ ಕಲಾಪವು ಗುರುವಾರ ಬೆಳಗ್ಗೆ 11 ಗಂಟೆಗೆ ಮುಂದೂಡಲಾಗಿದೆ ಅಂತ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ