ಅಗಿಲೆ ಯೋಗೀಶ್‌ ಆಮ್ ಆದ್ಮಿಗೆ ಸೇರ್ಪಡೆ

ಶನಿವಾರ, 6 ಆಗಸ್ಟ್ 2022 (14:21 IST)
ಸಮಾಜಸೇವೆ ಮೂಲಕ ಮನೆಮಾತಾಗಿರುವ ಹಾಸನದ ಜೆಡಿಎಸ್‌ ಮುಖಂಡ ಅಗಿಲೆ ಯೋಗೀಶ್‌ ಅವರು ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗಿದ್ದಾರೆ
 
ಅಗಾಧ ಸಮಾಜ ಸೇವೆಯಿಂದ ಹಾಸನ ಜಿಲ್ಲೆಯಲ್ಲಿ ಹೆಸರು ಮಾಡಿರುವ ಅಗಿಲೆ ಯೋಗೀಶ್‌ ಅವರ ಸೇರ್ಪಡೆಯಿಂದಾಗಿ ಆ ಭಾಗದಲ್ಲಿ ಪಕ್ಷಕ್ಕೆ ಆನೆಬಲ ಬಂದಂತಾಗಿದೆ ಎಂದು ಹೇಳಿದರು.ಎಎಪಿ ಸೇರಿದ ಬಳಿಕ ಮಾತನಾಡಿದ ಅಗಿಲೆ ಯೋಗೀಶ್‌, ರಾಜ್ಯವನ್ನಾಳಿದ ಮೂರು ಪಕ್ಷಗಳು ಕೂಡ ಭ್ರಷ್ಟಾಚಾರ ರಹಿತ ಆಡಳಿತ ನೀಡುವುದರಲ್ಲಿ ವಿಫಲವಾಗಿದೆ. ಹಾಸನ ಜಿಲ್ಲೆಯ ಜನರ ಆಶೋತ್ತರಗಳನ್ನು ಈಡೇರಿಸಲು ತೀವ್ರ ನಿರ್ಲಕ್ಷ್ಯ ತೋರಿವೆ. ಪ್ರಸ್ತುತ ರಾಜಕೀಯದಲ್ಲಿ ಆಮ್‌ ಆದ್ಮಿ ಪಾರ್ಟಿಯೊಂದೇ ಪಾರದರ್ಶಕ ಆಡಳಿತದಲ್ಲಿ ನಂಬಿಕೆ ಹೊಂದಿದೆ. ದೆಹಲಿ ಹಾಗೂ ಪಂಜಾಬ್‌ ಜನರಿಗೆ ಸಿಗುತ್ತಿರುವ ವಿವಿಧ ಸೌಲಭ್ಯಗಳು ನಮ್ಮ ಜನರಿಗೂ ಸಿಗುವಂತಾಗಬೇಕು ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ