ರವಿ ಸೋಲಿನಿಂದ ಇನ್ನೂ ಹೊರಬಂದಿಲ್ಲ, ಅದಕ್ಕೆ ಆರೋಪ ಮಾಡ್ತಿದ್ದಾರೆ : ಪಾಟೀಲ್

ಮಂಗಳವಾರ, 15 ಆಗಸ್ಟ್ 2023 (14:43 IST)
ವಿಜಯಪುರ : ಪಾಪ ಸಿ.ಟಿ ರವಿ ಸೋತಿದ್ದಾರೆ, ಅದಕ್ಕೆ ಏನ್ ಮಾಡೋಕೆ ಆಗುತ್ತೆ? ಇನ್ನೂ ಅವರು ಸೋಲಿನಿಂದ ಹೊರಗೆ ಬಂದಿಲ್ಲ. ಅದಕ್ಕಾಗಿ ಕೈ ಶಾಸಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಅಂತಾ ಆರೋಪ ಮಾಡ್ತಿದ್ದಾರೆ.
 
ಅವರು ನನ್ನ ಆತ್ಮೀಯ ಸ್ಮೇಹಿತರು ಸೋತಿರುವ ಮತ್ತು ಅಧಿಕಾರ ಕಳೆದುಕೊಂಡ ಮೇಲೆ ಕೆಲವರು ಅದನ್ನು ಹೇಳಲೇಬೇಕಾಗುತ್ತದೆ ಎಂದು ಸಚಿವ ಎಂ.ಬಿ ಪಾಟೀಲ್ ವ್ಯಂಗ್ಯವಾಡಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ 6 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬೀಳುತ್ತೆ ಎನ್ನುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ, 136 ಸೀಟ್ ಕೊಟ್ಟು ನಮ್ಮನ್ನ ಅಧಿಕಾರಕ್ಕೆ ತಂದಿದ್ದು ಈ ರಾಜ್ಯದ ಜನತೆ.

ಯಾವುದೇ ಸರ್ಕಾರ ಇರೋದು ಬಿಡೋದು ಜನತೆ ಮೇಲಿರುತ್ತದೆ. ಯಾರೋ ಒಬ್ಬರು ಹೇಳಿಕೆ ಕೊಟ್ಟರೆ ಅದು ಸರ್ಕಾರದ ಮೇಲೆ ಪರಿಣಾಮ ಬಿರೋದಿಲ್ಲ ಎಂದು ತಿರುಗೇಟು ನೀಡಿದ್ದಾರೆ. 

ವಿಜಯಪುರ ಮಹಾನಗರ ಪಾಲಿಕೆಗೆ ಆಯುಕ್ತರ ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಗೌರವಾನ್ವಿತ ಶಾಸಕರಿಗೆ (ಯತ್ನಾಳ್) ಹೇಳ್ತೆನೆ, ಮಹಾನಗರ ಪಾಲಿಕೆ ಅಧಿಕಾರಿಗಳು ಲೋವರ್ ಕೆಟಗೆರಿ ಅವರನ್ನು ನೇಮಿಸಿದ್ದಾರೆ ಎಂದು ಆರೋಪಿಸ್ತಾರೆ. ಶಾಸಕರು ಸ್ವಲ್ಪ ಹಿಂದೆ ಹೋಗಿ ನೆನಪು ಮಾಡಿಕೊಳ್ಳಲಿ. ಈ ಹಿಂದೆ ವಿಜಯಕುಮಾರ ಮೆಕ್ಕಳಕಿ ಅವರನ್ನ ಮುಂದುವರಿಸಬೇಕು ಎಂದು ಸಿಎಂಗೆ ಪತ್ರ ಕೊಟ್ಟಿದ್ದರು ಅವರೇ. ಅವರು ಯಾವ ಕೆಡರ್ನವರು ಇಬ್ರೂ ಸೇಮ್ ಕೆಡರ್ನವರೇ ಇದ್ದಾರೆ. ಮೊದಲು ಅದನ್ನ ನೋಡಿಕೊಳ್ಳಲಿ ಎಂದು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ