ಮೇಕೆದಾಟು ಯೋಜನೆಗೆ ಎಲ್ಲ ಪಕ್ಷಗಳಿಂದ ಸರ್ವಾನುಮತ

ಗುರುವಾರ, 24 ಮಾರ್ಚ್ 2022 (16:15 IST)
ಮೇಕೆದಾಟು ಯೋಜನ ವಿರೋಧಿಸಿ ತಮಿಳುನಾಡು ಸರ್ಕಾರ ( Tamil Nadu Government ) ವಿಧಾನ ಸಭೆಯಲ್ಲಿ ಅಂಗೀಕರಿಸಿದಂತ ನಿರ್ಣಯ ಖಂಡಿಸಿ, ಇದೀಗ ರಾಜ್ಯ ಸರ್ಕಾರ ಕೂಡ ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಸಿಎಂ ಬಸವರಾಜ ಬೊಮ್ಮಾಯಿಯವರು ( CM Basavaraj Bommai ), ವಿಧಾನಸಭೆಯಲ್ಲಿ ( Karnataka Assembly ) ನಿರ್ಣಯವನ್ನು ಮಂಡಿಸಿದ್ದಾರೆ.
ತಮಿಳುನಾಡು ಸರ್ಕಾರಕ್ಕೆ ಸಿಎಂ ಬೊಮ್ಮಾಯಿ ಕೌಟಂರ್ ಕೊಟ್ಟರು. ಸಿಎಂ ಬೊಮ್ಮಾಯಿ ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆ ಕುರಿತು ಮಂಡಿಸಿದಂತ ನಿರ್ಣಯಕ್ಕೆ, ಎಲ್ಲಾ ಪಕ್ಷಗಳಿಂದ ಸರ್ವಾನುಮತದ ಧ್ವನಿಮತದ ಅಂಗೀಕಾರ ಕೂಡ ನೀಡಲಾಗಿದೆ.
 
ಇಂದು ಅಧಿಕೃತವಾಗಿ ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆಗಾಗಿ ನಿರ್ಣಯ ಮಂಡಿಸಿದಂತ ಸಿಎಂ ಬಸವರಾಜ ಬೊಮ್ಮಾಯಿಯವರು, ಹಲವು ವಿಚಾರಗಳನ್ನು ತಾವು ಮಂಡಿಸಿದಂತ ನಿರ್ಣಯದಲ್ಲಿ ಸದನಕ್ಕೆ ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ