ಕೆಂಪಣ್ಣ ವಿರುದ್ಧ ಕಿಕ್ ಬ್ಯಾಕ್ ಆರೋಪ

ಶುಕ್ರವಾರ, 11 ಆಗಸ್ಟ್ 2023 (14:00 IST)
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರ ವಿರುದ್ದ ಮಾಜಿ ಸಚಿವ ಕೆ.ಗೋಪಾಲಯ್ಯ ಕಿಕ್ ಬ್ಯಾಕ್ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಂಪಣ್ಣನವರೇ, 40% ಕಮಿಷನ್ ಎಂದು ಬೆಂಗಳೂರಿನಿಂದ ದೆಹಲಿವರೆಗೂ ಹೋಗಿ ದೂರು ಕೊಟ್ರಿ. ಕೆಂಪಣ್ಣನವರೇ, ಕಾಂಗ್ರೆಸ್​ನಿಂದ ಕಿಕ್ ಬ್ಯಾಕ್ ತಗೊಂಡು ಗುತ್ತಿಗೆದಾರರ ಪರ ನಿಲ್ತಿರೋ ಅಥವಾ ಕಾಂಗ್ರೆಸ್ ಪರ ನಿಲ್ತೀರೋ? ನಿಮಗೆ ತಾಕತ್ ಇದ್ರೆ ಯಾರಿಗೆ ಹಣ ಕೊಟ್ಟಿದ್ದೀರಿ ಎಂದು ತಿಳಿಸಿ. ಯಾವ ಶಾಸಕರಿಗೆ, ಯಾವ ಸಚಿವರಿಗೆ 40 ಪರ್ಸೆಂಟ್ ಹಣ ಕೊಟ್ಟಿದ್ದೀರಿ ಎಂಬುದನ್ನು ಬಹಿರಂಗಪಡಿಸಿ. ಇಲ್ಲವಾದಲ್ಲಿ ರಾಜ್ಯದ ಜನರಲ್ಲಿ ನೀವು ಕ್ಷಮೆ ಕೇಳಿ ಎಂದು ಕೆಂಪಣ್ಣ ವಿರುದ್ಧ ಕಿಕ್ ಬ್ಯಾಕ್ ಆರೋಪ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ