ಬಿಜೆಪಿಗೆ ಸವಾಲ್ - ವಿಶ್ವಾಸಮತ ಎದುರಿಸಲು ಸಿದ್ಧವೆಂದ ಮೈತ್ರಿಪಕ್ಷ

ಗುರುವಾರ, 11 ಜುಲೈ 2019 (18:32 IST)
ಮೈತ್ರಿ ಪಕ್ಷಗಳ ಶಾಸಕರ ರಾಜೀನಾಮೆ ಪ್ರಹಸನ ಮುಗಿದಿಲ್ಲ. ಈ ನಡುವೆ ಬಿಜೆಪಿಗೆ ವಿಶ್ವಾಸವಿದ್ದರೆ ಮೈತ್ರಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿ. ಹೀಗಂತ ಬಿಜೆಪಿಗೆ ಸಚಿವರೊಬ್ಬರು ಸವಾಲು ಹಾಕಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆ ಬಳಿಕ ಮಾನಾಡಿರೋ ಸಚಿವ ಕೃಷ್ಣಭೈರೇಗೌಡ ಬಿಜೆಪಿ ನಡೆಯನ್ನು ಟೀಕೆ ಮಾಡಿದ್ರು.

ನಾಳೆಯಿಂದ ನಡೆಯಲಿರೋ ಅಧಿವೇಶನದಲ್ಲಿ ಹಣಕಾಸು ಕಾಯ್ದೆ ಚರ್ಚೆ ಹಾಗೂ ಮತಕ್ಕೆ ಹಾಕಲು ಆಗ್ರಹ ಕೇಳಿಬಂದರೆ ಅದಕ್ಕೂ ಸಿದ್ಧರಿದ್ದೇವೆ ಎಂದು ತಿರುಗೇಟು ನೀಡಿದ್ರು.

ಸಚಿವ ಸಂಪುಟ ಸಭೆಯಲ್ಲಿ ಪ್ರಸಕ್ತ ರಾಜಕೀಯ ಬೆಳವಣಿಗೆ ಕುರಿತು ಸುದೀರ್ಘ ಚರ್ಚೆ ನಡೆದಿದ್ದು, ಮೈತ್ರಿ ಸರಕಾರ ಮುಂದಿನ ನಡೆ ಬಗ್ಗೆ ಗಂಭೀರ ಹೆಜ್ಜೆ ಇಡಲು ತೀರ್ಮಾನ ಮಾಡಿದಂತಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ