ಸುದೀರ್ಘ ಗೈರುಹಾಜರಿಯ ನಂತ್ರ ಕಲಾಪಕ್ಕೆ ಹಾಜರಾದ ಅಂಬಿ

ಸೋಮವಾರ, 5 ಜೂನ್ 2017 (16:42 IST)
ಸುದೀರ್ಘ ಗೈರುಹಾಜರಿಯ ನಂತ್ರ ಮಾಜಿ ಸಚಿವ, ಹಿರಿಯ ನಟ ಅಂಬರೀಷ್ ಇಂದು ಕಲಾಪಕ್ಕೆ ಹಾಜರಾಗಿ ಅಚ್ಚರಿ ಮೂಡಿಸಿದರು.
  
ಸಚಿವ ಸ್ಥಾನದಿಂದ ವಂಚಿತರಾದ ನಂತರ ಪಕ್ಷದ ಹಿರಿಯ ಮುಖಂಡರ ವಿರುದ್ಧ ಮುನಿಸಿಕೊಂಡಿದ್ದ ಮಾಜಿ ಸಚಿವ ಅಂಬರೀಷ್ ಯಾವುದೇ ಕಲಾಪಗಳಲ್ಲಿ ಭಾಗಿಯಾಗಿರಲಿಲ್ಲ. ಅಂಬರೀಷ್ ಅವರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಪ್ರತಿಭಟನೆಗಳು ನಡೆದಿದ್ದವು.
 
ಸತತವಾಗಿ ಮೂರು ಬಾರಿ ಸದನದ ಅಧಿವೇಶನಕ್ಕೆ ಗೈರುಹಾಜರಾಗುವ ಶಾಸಕರ ಸದಸ್ಯತ್ವವನ್ನು ರದ್ದುಗೊಳಿಸುವ ಕಾನೂನಿನಡಿ ಅಂಬರೀಷ್ ಸದಸ್ಯತ್ವ ರದ್ದುಗೊಳಿಸುವಂತೆ ಸಭಾಪತಿಗೆ ದೂರು ನೀಡಲಾಗಿತ್ತು.
 
ಇಂದು ಕಲಾಪಕ್ಕೆ ಹಾಜರಾದ ಅಂಬರೀಷ್ ಮಂಡ್ಯ ಜಿಲ್ಲೆಯ ಶಾಸಕರು ಮತ್ತು ಇತರ ಶಾಸಕರೊಂದಿಗೆ ಆತ್ಮಿಯವಾಗಿ ಮಾತನಾಡುತ್ತಿರುವುದು ಸದನದಲ್ಲಿ ಕಂಡು ಬಂದಿತು. 

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್ಆಡಿ 2.5 ಲಕ್ಷ ರೂಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿಭಾಗವಹಿಸಲು  ಲಿಂಕ್ ಕ್ಲಿಕ್ ಮಾಡಿ..
http://kannada.fantasycricket.webdunia.com/
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ