ಇದಕ್ಕೆ ಪ್ರತಿಕ್ರಿಯಿಸಿರುವ ಸಿಟಿ ರವಿ, ಚುನಾವಣಾ ಆಯೋಗ ಸಾಂವಿಧಾನಿಕ ಸಂಸ್ಥೆ ಅದರ ಮೇಲೆ ಯಾವುದೇ ಸಾಕ್ಷಿ ಆಧಾರವಿಲ್ಲದೆ, ಆರೋಪ ಮಾಡುವುದು ಸಂವಿಧಾನ ವಿರೋಧಿಗಳ ಕೃತ್ಯ. ಪ್ರಜಾಪ್ರಭುತ್ವದಲ್ಲಿ, ಜನಾದೇಶದ ಮೇಲೆ ನಂಬಿಕೆ ಇಡದ ಕಾಂಗ್ರೆಸ್ಸಿನದ್ದು ಪ್ರಜಾಪ್ರಭುತ್ವ ವಿರೋಧಿ ಹೀನ ಮನಸ್ಥಿತಿಗೆ ಹಿಡಿದ ಕೈಗನ್ನಡಿ.
ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸದೇ ಇದ್ದರೆ, ಅದು ಹೇಗೆ ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ, ನಿಮ್ಮ ಇಂಡಿ ಒಕ್ಕೂಟದ ಪಕ್ಷಗಳು ಗೆದ್ದವು? ಅವರೂ ಅಕ್ರಮ ಎಸಗಿದ್ದಾರೆಯೇ? ಕರ್ನಾಟಕದಲ್ಲಿ 136 ಸ್ಥಾನಗಳನ್ನು ಗೆದ್ದ ನಿಮ್ಮ ಪಕ್ಷವೂ ಚುನಾವಣಾ ಅಕ್ರಮ ನಡಸಿದ್ದೀರಾ?