ಅಮಿತ್ ಶಾ ಪ್ರವಾಸ ದಿಡೀರ್ ರದ್ದು
ಸಂಸತ್ತಿನಲ್ಲಿಂದು ಸಿಜೆಇ ವಿರುದ್ಧ ಮಹಾಭಿಯೋಗ ಮಂಡನೆ ಹಿನ್ನಲೆಯಲ್ಲಿ ಸಂಸತ್ತಿನ ಕಲಾಪದಲ್ಲಿ ಪಾಲ್ಗೊಳ್ಳಲು ಅಮಿತ್ ಶಾ ನವದೆಹಲಿಗೆ ವಾಪಸಾಗಿದ್ದಾರೆ. ಇದರಿಂದಾಗಿ ಅಮಿತ್ ಶಾ ಬರುವಿಕೆಗಾಗಿ ಕಾಯುತ್ತಿದ್ದ ಮುಂಬೈ ಕರ್ನಾಟಕ ಭಾಗದ ಬಿಜೆಪಿ ಕಾರ್ಯಕರ್ತರಿಗೆ ನಿರಾಸೆಯಾಗಿದೆ.
ಇಂದಿನ ಕಾರ್ಯಕ್ರಮಗಳನ್ನು ಮುಂದೂಡಲಾಗಿದ್ದು, ಏಪ್ರಿಲ್ 12, 13 ರಂದು ಆಯೋಜಿಸಲಾಗುತ್ತಿದೆ. ಕಾಂಗ್ರೆಸ್ ಪ್ರಾಬಲ್ಯವಿರುವ ಈ ಭಾಗದಲ್ಲಿ ಅಮಿತ್ ಶಾ ಆಗಮನ ಪಕ್ಷಕ್ಕೆ ಹೊಸ ಚೈತನ್ಯ ನೀಡಬಹುದು ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಕಾರ್ಯಕರ್ತರಿದ್ದಾರೆ.