ಅಣ್ಣಾಮಲೈ ಕರ್ನಾಟಕ್ಕೆ ಬನ್ನಿ, ಎಲ್ಲೇ ನಿಂತ್ರೂ ಗೆದ್ದೇ ಗೆಲ್ಲಿಸ್ತೀವಿ: ಅಭಿಮಾನಿಗಳ ಪೋಸ್ಟ್‌ ವೈರಲ್ ‌

sampriya

ಶುಕ್ರವಾರ, 7 ಜೂನ್ 2024 (10:47 IST)
Photo By X
ಬೆಂಗಳೂರು: ಕೊಯಮತ್ತೂರು ಕ್ಷೇತ್ರದಿಂದ ಲೋಕಸಭೆ ಚುನಾವಣಾ ಅಖಾಡಕ್ಕಿಳಿದ ಕೆ.ಅಣ್ಣಾಮಲೈ ಅವರ ಸೋಲಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅವರ ಅಭಿಮಾನಿಗಳು ತುಂಬಾನೇ ನೋವು ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಬೆಂಬಲಿಸಿದ್ದಾರೆ.

ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಅಣ್ಣಾಮಲೈ ಸೋಲಿನ ಬಗ್ಗೆ ಅವರ ಅಭಿಮಾನಿಗಳು ನೋವು ವ್ಯಕ್ತಪಡಿಸುತ್ತಾ, ನೀವು ಕರ್ನಾಟಕದ ಯಾವುದೇ ಮೂಲೆಯಲ್ಲೂ ನಿಲ್ಲುತ್ತಿದ್ದರು ಗೆಲ್ತಿದ್ರಿ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್‌ ವೈರಲ್‌ ಆಗಿದೆ. ಪೋಸ್ಟ್‌ನಲ್ಲಿ ಹೀಗಿದೆ, ಈ ವ್ಯಕ್ತಿ ಕರ್ನಾಟಕದ ಯಾವುದೇ ಮೂಲೆಯಲ್ಲಿ ನಿಂತಿದ್ರೂ ಗೆಲ್ತಿದ್ರು, ಎಲ್ಲೇ ಸ್ಪರ್ಧೆಗೆ ನಿಲ್ಲುತ್ತಿದ್ದರು ಗೆಲ್ಲಬೇಕಿತ್ತು. ಅನ್ಯಾಯವಾಗಿ ಸೋಲಿಸಿದಿರಲ್ಲ, ಶಿಕ್ಷಿತರಿಗೆ ರಾಜಕೀಯದೊಳಗೆ ಭವಿಷ್ಯ ಇಲ್ಲ, ಆಂಧ್ರಪ್ರದೇಶದ ಮುಂದಿನ ಪರಿಸ್ಥಿತಿ ಏನು, ಇನ್ನು ಮುಂದಿನ ದಿನಗಳಲ್ಲಿ ಏನೇನೂ ನೋಡಬೇಕು ಈ ಕಣ್ಣಲ್ಲಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನೂ ಸೋಲಿನ ಬಗ್ಗೆ ನೋವು ವ್ಯಕ್ತಪಡಿಸಿದ ಅಣ್ಣಾಮಲೈ ಅವರ ವಿಡಿಯೋ ಹಂಚಿದ ಅವರ ಅಭಿಮಾನಿಗಳು, ಒಂದು ವಜ್ರ ತಯಾರ್ ಆಗೋಕೆ ಸಮಯ ಬೇಕು ಸರ್‌, ಪ್ಲಾಸ್ಟಿಕ್ ಕವರ್ ರೆಡಿ ಆಗೋಕೆ ಜಾಸ್ತಿ ಸಮಯ ಬೇಕಾಗಿಲ್ಲ, ನೀವು ಎದೆಗುಂದಾಬೇಡಿ ಎಂದು ಸಮಾಧಾನ ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ಬನ್ನಿ ಗೆದ್ದೇ ಗೆಲ್ಲಿಸ್ತೀವಿ ನಿಮ್ಮನ್ನು, ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ ಜೈ ಅಣ್ಣಾಮಲೈ ಎಂದು ಬರೆದು ಹುರಿದುಂಬಿಸುತ್ತಿದ್ದಾರೆ.

ಅಣ್ಣಾಮಲೈ ಅವರು ಉಡುಪಿಯಲ್ಲಿ ಮಾಜಿ ಎಸ್‌ಪಿ ಅಧಿಕಾರಿಯಾಘಿ ಕರ್ತವ್ಯ ನಿರ್ವಹಿಸಿ ತಮ್ಮ ವೃತ್ತಿಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿಕೊಟ್ಟರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ