ಡಾ.ಸಿ.ಎನ್‌ ಮಂಜುನಾಥ್‌ ಗೆಲುವಿಗೆ ಮುಡಿಕೊಟ್ಟು ಹರಕೆ ತೀರಿಸಿದ ಮುಸ್ಲಿಂ ವ್ಯಕ್ತಿ

sampriya

ಗುರುವಾರ, 6 ಜೂನ್ 2024 (20:37 IST)
Photo By X
ಕನಕಪುರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿಕೆ ಸುರೇಶ್‌ ವಿರುದ್ಧ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್‌ ಮಂಜುನಾಥ್‌ ಅವರ ಗೆಲುವಿಗಾಗಿ ಹರಕೆ ಹೊತಿದ್ದ ಮುಸ್ಲಿಂ ವ್ಯಕ್ತಿ ಮಲೆ ಮಹದೇಶ್ವರ ದೇವಸ್ಥಾನಕ್ಕೆ ತೆರಳಿ ಮುಡಿ ಕೊಟ್ಟಿದ್ದಾರೆ.

ಕನಕಪುರ ತಾಲ್ಲೂಕಿನ ಜೆಡಿಎಸ್ ಮುಖಂಡ ಯೂನಿಸ್ ಅಲಿಖಾನ್ ಅವರು ಹರಕೆ ಹೊತ್ತು ಮುಡಿ ಕೊಟ್ಟ ವ್ಯಕ್ತಿ. 

ರಾಜ್ಯದ ಹೈವೋಲ್ಟೇಜ್‌ ಕ್ಷೇತ್ರವಾದ ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್‌ನ ಡಿಕೆ ಸುರೇಶ್‌ ಹಾಗೂ ಬಿಜೆಪಿ ಡಾ.ಸಿ.ಎನ್‌ ಮಂಜುನಾಥ್‌ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿತ್ತು. ಇನ್ನೂ ಡಾ.ಮಂಜುನಾಥ್‌ ಅವರ ಗೆಲುವಿಗೆ ಮುಸ್ಲಿಂ ವ್ಯಕ್ತಿ ದೇವರಲ್ಲಿ ವಿಶೇಷವಾಗಿ ಬೇಡಿಕೊಂಡಿದ್ದ. ಇನ್ನೂ  ಡಿಕೆ ಸುರೇಶ್‌ ವಿರುದ್ದ
  ಮಂಜುನಾಥ್‌ ಅವರು ಗೆಲುವು ಸಾಧಿಸುತ್ತಿದ್ದ ಹಾಗೇ ಮುಡುಕೊಟ್ಟು ಹರಕೆ ತೀರಿಸಿದ್ದಾರೆ.

ಅದ್ಯ ಸಾಮಾಜಿಕ ಜಾಲತಾಣದಲ್ಲಿ ಮುಡಿ ಕೊಟ್ಟು ಹರಕೆ ತೀರಿಸಿದ ವಿಡಿಯೊ ಮತ್ತು ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ವಿಡಿಯೋ ಹಂಚಿ ಎಕ್ಸ್‌ನಲ್ಲಿ ಬರೆದುಕೊಂಡಿರುವ ಡಾ.ಮಂಜುನಾಥ್‌ ಅವರು, ಯೂನಸ್ ಖಾನ್ ಅವರಂತಹ ಅನೇಕರ ಪ್ರೀತಿ-ವಿಶ್ವಾಸ, ಬೆಂಬಲದಿಂದ ಬೆಂಗಳೂರು ಗ್ರಾಮಾಂತರದಲ್ಲಿ ನನ್ನ ಗೆಲುವು ಸಾಧ್ಯವಾಗಿದೆ. ಮಹದೇಶ್ವರ ಬೆಟ್ಟಕ್ಕೆ ಹೋಗಿ ಮಲೆ ಮಹದೇಶ್ವರ ದೇವರಿಗೆ ಮುಡಿ ಕೊಟ್ಟು ಹರಕೆ ತೀರಿಸಿರುವ ಸಂಗತಿ ತಿಳಿದು ಭಾವುಕನಾದೆ. ನಮ್ಮ ಜನತೆಯ ಇಂತಹ ಅಭೂತಪೂರ್ವ ಬೆಂಬಲಕ್ಕೆ ನಾನು ಆಭಾರಿ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ