ಕಿಂಗ್ ಪಿನ್ ಉದಯ ವಿರುದ್ಧ ಮತ್ತೊಂದು ಕೇಸ್ ದಾಖಲು

ಶನಿವಾರ, 13 ಅಕ್ಟೋಬರ್ 2018 (19:22 IST)
ಕಚೇರಿ ಬಾಡಿಗೆ ಪಡೆದು ಲಕ್ಷ ಲಕ್ಷ ಬಾಡಿಗೆ ಹಣ ನೀಡದೇ ವಂಚನೆ ಮಾಡಿದ್ದ ಕಿಂಗ್ ಪಿನ್ ಉದಯ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ.

ಮಲ್ಲೇಶ್ವರಂನಲ್ಲಿ ಕಚೇರಿ ಬಾಡಿಗೆ ಪಡೆದು 18 ಲಕ್ಷ ಬಾಡಿಗೆ ಹಣ ನೀಡದೇ ವಂಚಿಸಿದ್ದ ಕಿಂಗ್ ಪಿನ್ ಉದಯ್, ಫೈನಾನ್ಸ್ ಕಚೇರಿ ನಡೆಸುವ ಉದ್ಧೇಶದಿಂದ ಮಲ್ಲೇಶ್ವರಂ ಲಿಂಕ್ ರಸ್ತೆಯಲ್ಲಿ ಕಚೇರಿ ಬಾಡಿಗೆ ಪಡೆದಿದ್ದ.

ಮಾಸಿಕ 32 ಸಾವಿರ ರೂ. ಬಾಡಿಗೆ ನೀಡುವುದಾಗಿ ಕರಾರು ಮಾಡಿಕೊಂಡಿದ್ದ. ಆದರೆ ಕರಾರಿನಂತೆ ಮಾಲೀಕ ಗಿರೀಶ್ ಅವರಿಗೆ ಹಣ ನೀಡದೇ ಸತಾಯಿಸುತ್ತಿದ್ದ. ಗಿ ಗಿರೀಶ್ ಗೌಡ ಅವರಿಗೆ ಬೆದರಿಕೆ ಹಾಕಿ ಏಕಾಏಕಿ ಕಟ್ಟಡದಲ್ಲಿರುವ ಎಲ್ಲ ಮಳಿಗೆಗಳಿಗೆ ಬೀಗ ಹಾಕಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಪೊಲೀಸರು ನಾಪತ್ತೆಯಾಗಿರುವ ಉದಯಗೌಡನ ಪತ್ತೆಗಾಗಿ ಬಲೆ ಬೀಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ