ದಾಸರಹಳ್ಳಿಯಲ್ಲಿ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್

ಗುರುವಾರ, 16 ಸೆಪ್ಟಂಬರ್ 2021 (20:05 IST)
ದಾಸರಹಳ್ಳಿಯಲ್ಲಿ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್ ನಡೆದಿದೆ. ಯಮನಂತೆ ಬಂದ ಟಿಟಿ ಚಾಲಕ  ಎರಡು ಬೈಕ್​ಗಳಿಗೆ ಗುದ್ದಿದ್ದಾನೆ. ಟಿಟಿ ವಾಹನ ಗುದ್ದಿದ ರಭಸಕ್ಕೆ 36 ವರ್ಷದ ಬಸವರಾಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೊಂದು ಬೈಕ್‌ನಲ್ಲಿದ್ದ  ಪಾತಿಮಾ ಹಾಗು ಮೋಹಮ್ಮದ್ ಎಂಬ ದಂಪತಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತಕ್ಕೆ ಟಿಟಿ ಚಾಲಕನ ಅತಿವೇಗವೇ ಕಾರಣ ಅಂತ ಹೇಳಲಾಗ್ತಿದೆ. ಇನ್ನುಅಪಘಾತದ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಟಿಟಿ ಚಾಲಕನನ್ನು ವಶಕ್ಕೆ ಪಡೆದಿರುವ ಪಿಣ್ಯ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಫಘಾತಕ್ಕೆ ನಿಖರ ಕಾರಣ ಪತ್ತೆ ಹಚ್ಚಲು ಮುಂದಾಗಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ