ಹೊಸವರ್ಷಕ್ಕೆ ಪೊಲೀಸ್ ಕಮಿಷನರ್ ರಿಂದ ಮತ್ತೊಂದು ಮಾದರಿ ಕಾರ್ಯ

ಬುಧವಾರ, 3 ಜನವರಿ 2024 (15:00 IST)
ಡಾ.ರಾಜ್ ಕುಮಾರ್ ನೇತ್ರದಾನ ಕೇಂದ್ರಕ್ಕೆ ಕಣ್ಣುದಾನ ಪೊಲೀಸ್ ಕಮಿಷನರ್ ಬಿ ದಯಾನಂದ್ ಮಾಡಿದ್ದಾರೆ.ಕಣ್ಣುದಾನ ಮಾಡಿ ಹಲವು ಪೊಲೀಸರಿಗೆ ಕಮಿಷನರ್ ಮಾದರಿಯಾಗಿದ್ದಾರೆ.ನಾರಾಯಣ ನೇತ್ರಾಲಯ ರಾಜ್ ಕುಮಾರ್ ನೇತ್ರದಾನ ಕೇಂದ್ರದಿಂದ ಕಮಿಷನರ್ ಗೆ ಪ್ರಶಂಸನಾ ಪತ್ರ ನೀಡಲಾಗಿದೆ.

ಈ ಬಾರಿ ಹೊಸವರ್ಷಕ್ಕೆ ಸಿಹಿ ತಿನಿಸು ಹೂ ಗುಚ್ಚ ಬೇಡ ಎಂದು ಕಮಿಷನರ್ ಹೇಳಿದ್ರು.ಯಾರು ಹೂ ಗುಚ್ಚ ನೀಡಿ ಶುಭಕೋರಲು ಬರಬೇಡಿ.ಅದರ ಬದಲಿಗೆ ತಮ್ಮ ವ್ಯಾಪ್ತಿಯ ಅನಾಥಾಶ್ರಮಗಳಿಗೆ ಕೈಯ್ಯಲ್ಲಾದ ಸಹಾಯ ಮಾಡಿ ಎಂದು ದಯಾನಂದ್ ಹೇಳಿದ್ರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ