ಬೆಂಗಳೂರಿನ ಜನತೆಗೆ ಚಿರತೆ ಭಯ?

ಶುಕ್ರವಾರ, 25 ನವೆಂಬರ್ 2022 (13:49 IST)
ಬೆಂಗಳೂರು : ಸಿಲಿಕಾನ್ ಸಿಟಿ ಜನತೆಗೆ ಈಗ ಚಿರತೆಯ ಭಯ ಆರಂಭವಾಗಿದ್ದು, ಬನಶಂಕರಿ 6 ಸ್ಟೇಜ್ನಲ್ಲಿ ಚಿರತೆ ಕಾಣಿಸಿಕೊಂಡಿದೆ.

ಒಬ್ಬೊಬ್ಬರೇ ಓಡಾಡಬೇಡಿ, ಅದರಲ್ಲೂ ರಾತ್ರಿಯಾದರೆ ಮನೆಯಿಂದ ಹೊರಬರಬೇಡಿ ಎಂದು ವೆಲ್ ಫೇರ್ ಅಸೋಸಿಯೇಷನ್ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.

ತುರಹಳ್ಳಿ ಅರಣ್ಯ ಪ್ರದೇಶಕ್ಕೆ ಹತ್ತಿರವಿರುವ ಬನಶಂಕರಿ ಆರನೇ ಹಂತದಲ್ಲಿ ಚಿರತೆ ಕರುವೊಂದನ್ನು ತಿಂದು ಹಾಕಿದೆ. ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. 

ಕಳೆದೊಂದು ವಾರದಿಂದ ಚಿರತೆ ಭೀತಿಯಲ್ಲಿ ಜನರಿದ್ದು ಈಗಾಗಲೇ ಚಿರತೆ ಹಿಡಿಯಲು ಬೋನಿನ ವ್ಯವಸ್ಥೆ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ