ಮಕ್ಕಳಿಗೆ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಲೈವ್ ವೀಕ್ಷಣೆ ಮಾಡುವ ವ್ಯವಸ್ಥೆ

geetha

ಶುಕ್ರವಾರ, 19 ಜನವರಿ 2024 (15:44 IST)
ಬೆಂಗಳೂರು-ಹೊಸ ಚರಿತ್ರೆಗೆ ರಾಮನೂರು ಸಿದ್ಧವಾಗ್ತಿದೆ‌.ಜ.22ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಇದೆ.ಜನವರಿ 22 ರಂದು ಶಾಲೆಗಳ ಅಂಗಳದಲ್ಲೂ  ಸಾಂಸ್ಕೃತಿಕ ಲೋಕ ಅರಳಿಕೊಳ್ಳಲಿದೆ ಹೀಗಾಗಿ ಖಾಸಗಿ ಶಾಲೆಗಳ ಒಕ್ಕೂಟ ಕ್ಯಾಮ್ಸ್ ನಿಂದ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
 
ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಲೈವ್ ನೋಡಲು ಶಾಲೆಯಲ್ಲಿ ಅವಕಾಶ ಇದೆ.ಶಾಲೆಗಳಲ್ಲಿಯೇ ಮಕ್ಕಳಿಗೆ ರಾಮಮಂದಿರದ ಲೈವ್ ನೋಡಲು ವ್ಯವಸ್ಥೆ ಮಾಡಲಾಗಿದೆ.ಮಕ್ಕಳಿಗೆ ರಜೆ ಕೊಟ್ಟರೆ ಆವತ್ತಿನ ಸಮಯವನ್ನ ಬೇರೆಲ್ಲೋ ಸ್ಪೆಂಡ್ ಮಾಡ್ತಾರೆ ಅದರ ಬದಲು ಸಾಂಸ್ಕೃತಿಕ ಉಡುಪುಗಳನ್ನ ಧರಿಸಿ ಸ್ಕೂಲ್ ಗೆ ಬರುವಂತೆ ಮಕ್ಕಳಿಗೆ ಸೂಚನೆ ನೀಡಲಾಗಿದೆ.ಶಾಲೆಯಲ್ಲಿಯೇ ಮಕ್ಕಳಿಗೆ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ  ಲೈವ್ ವೀಕ್ಷಣೆ ಮಾಡುವ ವ್ಯವಸ್ಥೆ ಮಾಡಲು ಶಾಸಗಿ ಶಾಲೆಗಳ ಒಕ್ಕೂಟ ಕ್ಯಾಮ್ಸ್  ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ತೀರ್ಮಾನ ಮಾಡಿರುವುದಾಗಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ