ಬರ್ಬರವಾಗಿ ಕೊಲೆ ನಡೆಸಿದ ಆರೋಪಿಯ ಬಂಧನ

ಸೋಮವಾರ, 11 ಡಿಸೆಂಬರ್ 2023 (14:22 IST)
ಟಿಂಬರ್ ಲೇಔಟ್ನಲ್ಲಿ ಆಟೋಡ್ರೈವರ್ ಅರುಣ್ ಕೊಲೆ ಪ್ರಕರಣ ಸಂಬಂಧ 11 ಮಂದಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.ಪ್ರಮುಖ ಆರೋಪಿ ಹರೀಶ್ , ಮಧು ಸೇರಿ ಒಟ್ಟು ಹನ್ನೊಂದು ಮಂದಿ ಆರೋಪಿಗಳನ್ನ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಗೋರಿ ಪಾಳ್ಯ, ಜೆ.ಜೆ.ನಗರದವರು.ಬ್ಯಾಟರಾಯನಪುರ ಪೊಲೀಸರಿಂದ ಆರೋಪಿಗಳ ಬಂಧನ ಮಾಡಿದ್ದು,ಕಳೆದ ಸೋಮವಾರ ರಾತ್ರಿ ಅರುಣ್ ನನ್ನ ಆರೋಪಿಗಳು ಕೊಲೆ ಮಾಡಿದರು.ಟಿಂಬರ್ ಲೇಔಟ್ ನಲ್ಲಿ ಬರ್ಬರವಾಗಿ ಕೊಲೆ ಮಾಡಿ ತಲೆಮರಿಸಿಕೊಂಡಿದ್ದರು.

ಕೊಲೆಯಾದ ಅರುಣ್ ಆಗಾಗ ಗೋರಿಪಾಳ್ಯ ಕಡೆ ಹೋಗಿ ಆರೋಪಿಗಳಿಗೆ ಬೆದರಿಸಿ ಬರ್ತಾ ಇದ್ದ.ಹೀಗಾಗಿ ಸ್ಮಶಾನದಲ್ಲಿ ಕೂತು  ಆರೋಪಿಗಳು ಅರುಣ್ ಕೊಲೆಗೆ  ಸ್ಕೇಚ್ ಹಾಕಿದ್ದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ